3500 ಕೋಟಿ ಎಲ್ಲಿ ಹೋಯ್ತು? ಉತ್ತರವಿಲ್ಲ

ಕಬ್ಬಿಣ ಅದಿರಿನ ಗಣಿಗಾರಿಕೆ ಅಕ್ರಮ ಕುರಿತಂತೆ ಲೋಕಾಯುಕ್ತ ಸಂಸ್ಥೆ ಹಾಗೂ ಸಿಬಿಐ ತನಿಖೆ ನಡೆಸಿದ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಅಕ್ರಮಗಳನ್ನು ಕುರಿತ ವರದಿಯನ್ನು ತಯಾರಿಸಿ ಸಿಎಜಿ ಸರ್ಕಾರಕ್ಕೆ ನೀಡಿದೆ.
ಅದರೆ, ವಿಧಾನಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರು ಇದೇ ವರದಿಯನ್ನು ಮಂಡಿಸಿದಾದರೂ ಚರ್ಚೆಗೆ ಅವಕಾಶ ನೀಡಲಿಲ್ಲ. ಗುರುವಾರ ಕೂಡಾ ಸಿಎಜಿ ವರದಿ ಬಗ್ಗೆ ಚರ್ಚೆ ನಡೆಯದ ಕಾರಣ ವಿಪಕ್ಷಗಳು ಕೆರಳಿ ಸದನದಿಂದ ಹೊರ ನಡೆದವು.
ಸಿಎಜಿ ನೀಡಿದ ವರದಿಯ ಮುಖ್ಯಾಂಶಗಳು ಇಂತಿದೆ:
* ತುಮಕೂರಿನಲ್ಲಿ ಐದು, ಚಿತ್ರದುರ್ಗದಲ್ಲಿ ಎಂಟು, ಹೊಸಪೇಟೆಯಲ್ಲಿ ನಾಲ್ಕು ಸೇರಿದಂತೆ ಒಟ್ಟು 17 ಉಲ್ಲಂಘನಾ ಪ್ರಕರಣಗಳು ಪತ್ತೆ
* ಭಾರತೀಯ ಗಣಿ ಸಂಸ್ಥೆ ಪ್ರಕಟಿಸಿದ ಕಬ್ಭಿಣ ಅದಿರು ದರವನ್ನು ತಪ್ಪಾಗಿ ಅರ್ಥೈಸಿ ಮೂರು ವಿಭಾಗಗಳ 36 ಘಟಕಗಳಲ್ಲಿ 13.11 ಕೋಟಿ ರೂ. ರಾಜ ಧನ ಕಡಿಮೆ ವಿಧಿಸಿದೆ
* 120 ಕಲ್ಲು ಗಣಿಗಾರಿಕೆ ಯೋಜನೆಗಳಲ್ಲಿ 104 ಗ್ರಾನೈಟ್ ಗಣಿಗಾರಿಕೆ ಯೋಜನೆಗಳನ್ನು ಪರೀಕ್ಷೆ ಮಾಡದೆ ಅನುಮತಿ ನೀಡಲಾಗಿದೆ.
* ಶಾಸನಬದ್ಧ ಪರವಾನಗಿ ಇಲ್ಲದೆ ಅಕ್ರಮವಾಗಿ 562.79 ಕೋಟಿ ರು ಮೌಲ್ಯದ ಅದಿರು ಸಾಗಾಟ.
* ಚಿತ್ರದುರ್ಗ, ಬಳ್ಳಾರಿಯಲ್ಲಿ ನಾಲ್ವರು ಗುತ್ತಿಗೆದಾರರು 150.59 ಕೋಟಿ ರು ಮೌಲ್ಯದ 14.68 ಮೆಟ್ರಿಕ್ ಟನ್ ಕಬ್ಬಿಣ ಅದಿರನ್ನು ಅಕ್ರಮವಾಗಿ ಹೊರ ತೆಗೆದಿದ್ದಾರೆ.
* 212.39 ಎಕರೆ ಭೂಮಿ ಡಿನೋಟಿಫಿಕೇಷನ್ ನಿಂದ ಬಿಡಿಎಗೆ 499.67 ಕೋಟಿ ರು ನಷ್ಟ
* 2007ರಿಂದ ಸುಮಾರು 438 ಜಿ ಕೆಟಗೆರಿ ನಿವೇಶನ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಹಲವು ನಿಯಮಬಾಹಿರ ಹಾಗೂ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟ.
* ಒಟ್ಟಾರೆ 3,414 ಕೋಟಿ ರು ರಾಜಸ್ವ ನಷ್ಟ. ಈ ಪೈಕಿ 1,212 ಕೋಟಿ ರು ನಷ್ಟವನ್ನು ಸರ್ಕಾರ ಒಪ್ಪಿಕೊಂಡಿದೆ. 7.22 ಕೋಟಿ ರು ಮಾತ್ರ ವಸೂಲಿ ಮಾಡಲಾಗಿದೆ.
ರಾಜ್ಯದಲ್ಲಿ ಮರಳು ಗಣಿಗಾರಿಕೆ ಕುರಿತಂತೆ 14 ಪ್ರಮುಖ ಶಿಫಾರಸ್ಸುಗಳನ್ನು ಮಾಡಿರುವ ಮಹಾಲೇಖಪಾಲರು ಗುತ್ತಿಗೆ ಪಡೆದವರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ನೆಡು ತೋಪು ಬೆಳೆಸಿ ಪರಿಸರ ಸಂರಕ್ಷಿಸಬೇಕೆಂದು ಸೂಚಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications