ಎಚ್ ಡಿ ಕೋಟೆ, ಡಿ.12: ಮಂಡ್ಯ ಜಿಲ್ಲಾ ಡಿಎಆರ್ ವಿಭಾಗದಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.
ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಬಳಿ ಪೇದೆ ಮಂಜುನಾಥನನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆ ವೇಳೆ, ಎಚ್ ಡಿ ಕೋಟೆ ಸಮೀಪದ ಬೀಚನಹಳ್ಳಿಯಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.