ತಿರುಮಲದಲ್ಲಿ 3 ನಾಮ ಕಡ್ಡಾಯ ಹಾಗೂ 2 ಸುದ್ದಿಗಳು

ಆ ಆದೇಶವನ್ನು ಟಿಟಿಡಿಯ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುವ ಎಲ್ ವಿ ಸುಬ್ರಮಣ್ಯಂ ಅವರು ಶನಿವಾರ ಹೊರಡಿಸಿದ್ದಾರೆ. ಹಣೆಯ ಮೇಲೆ ಎಲ್ಲ ಸಿಬ್ಬಂದಿಗಳೂ ತಿಲಕ ಧರಿಸುವುದರಿಂದ ದೇವಸ್ಥಾನದ ಪ್ರತಿಷ್ಠೆ ಇನ್ನೂ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪರಿಪಾಠವನ್ನು ಕಾರ್ತೀಕ ಮಾಸದಿಂದ ಯಾರಾದರೂ ಪಾಲಿಸಲು ವಿಫಲರಾದರೆ ಅವರನ್ನು ಟಿಟಿಡಿಯಿಂದಲೇ ಕಿತ್ತುಹಾಕಲಾಗುವುದು ಎಂದು ಮಾಜಿ ಎಕ್ಸಿಕ್ಯೂಟಿವ್ ಆಫೀಸರ್ ಪಿ.ವಿ.ಆರ್.ಕೆ. ಪ್ರಸಾದ್ ಅವರು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಕೆಲಸ ಉಳಿಸಿಕೊಳ್ಳಬೇಕಿದ್ದರೆ ಎಲ್ಲ ಸಿಬ್ಬಂದಿಗಳೂ ನಾಮ ಹಾಕಿಕೊಳ್ಳಲೇಬೇಕು.
ಸಿಬ್ಬಂದಿಗಳು ಮಾತ್ರವಲ್ಲ ತಿರುಪತಿಗೆ ದಿನನಿತ್ಯ ಬರುವ ಲಕ್ಷಾಂತರ ಭಕ್ತಾದಿಗಳೆಲ್ಲ ಈ ನಾಮವನ್ನು ಹಾಕಿಕೊಳ್ಳಲೇಬೇಕು. ಹಾಕಿಕೊಂಡವರಿಗೆ ಮಾತ್ರ ಪ್ರವೇಶವೆಂದು ಪತ್ರಿಕೆಯೊಂದರಲ್ಲಿ ಸೋಮವಾರ ಪ್ರಕಟವಾಗಿದ್ದು, ಭಕ್ತರನ್ನು ಭಾರೀ ಗೊಂದಲಕ್ಕೆ ನೂಕಿತ್ತು. ಈಗ, ಸಿಬ್ಬಂದಿಗಳು ಮಾತ್ರ ನಾಮ ಹಾಕಿಕೊಳ್ಳಬೇಕೆಂಬುದು ಅಧಿಕೃತವಾಗಿದೆ. ಭಕ್ತಾದಿಗಳು ಎಂದಿನಂತೆ ದೇವಸ್ಥಾನ ಪ್ರವೇಶಿಸಬಹುದು.
ಜ.1ಕ್ಕೆ ದರ್ಶನಕ್ಕಾಗಿ ವಿಶೇಷ ಟಿಕೆಟ್ : 2013ರ ಹೊಸವರ್ಷದ ಮೊದಲ ದಿನ ಜನವರಿ 1ರಂದು ಏಳುಕೊಂಡಲವಾಡ ಗೋವಿಂದನ ವಿಶೇಷ ದರ್ಶನ ಪಡೆಯಬೇಕೆನ್ನುವವರಿಗಾಗಿ ಟಿಟಿಡಿ ನವೆಂಬರ್ 7ರಂದು ಕೇವಲ 50 ರು.ಗಳ ವಿಶೇಷ ಟಿಕೆಟ್ಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸವರ್ಷದ ದಿನದಂದು ಸಾಗರೋಪಾದಿಯಲ್ಲಿ ಬರುವ ಭಕ್ತಾದಿಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಟಿಕೆಟ್ಗಳನ್ನು ದೇಶದಾದ್ಯಂತ ಇರುವ 'ಈ-ದರ್ಶನ' ಕೌಂಟರಲ್ಲಿ ಪಡೆಯಬಹುದಾಗಿದೆ. ಕೋಟಾ ಇರುವಷ್ಟೇ ಟಿಕೆಟ್ಗಳನ್ನು ಮಾರಲಾಗುವುದು ಎಂದು ಟಿಟಿಡಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಆಧ್ಯಾತ್ಮಿಕ ಗ್ರಂಥಾಲಯ ಸ್ಥಾಪನೆ : ಹಿಂದೂ ಸನಾತನ ಧರ್ಮದ ಜ್ಞಾನ ಸಮೃದ್ಧವಾಗಿರುವ ಪುರಾತನ ಗ್ರಂಥಗಳನ್ನು ಕಾಪಾಡುವ ಮತ್ತು ಮುಂದಿನ ಪೀಳಿಗೆಗಳಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದ ಆಂಧ್ರಪ್ರದೇಶದ ಪ್ರತಿ ಜಿಲ್ಲೆಗಳಲ್ಲಿ ಆಧ್ಯಾತ್ಮಿಕ ಗ್ರಂಥಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಎಕ್ಸಿಕ್ಯೂಟಿವ್ ಆಫೀಸರ್ ಎಲ್ ವಿ ಸುಬ್ರಮಣ್ಯಂ ಅವರು ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ತಿಳಿಯುವಂತಹ ಪುಸ್ತಕಗಳನ್ನು ಈ ಗ್ರಂಥಾಲಯಗಳಲ್ಲಿ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications