ತಿರುಮಲದಲ್ಲಿ 3 ನಾಮ ಕಡ್ಡಾಯ ಹಾಗೂ 2 ಸುದ್ದಿಗಳು

ಆ ಆದೇಶವನ್ನು ಟಿಟಿಡಿಯ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುವ ಎಲ್ ವಿ ಸುಬ್ರಮಣ್ಯಂ ಅವರು ಶನಿವಾರ ಹೊರಡಿಸಿದ್ದಾರೆ. ಹಣೆಯ ಮೇಲೆ ಎಲ್ಲ ಸಿಬ್ಬಂದಿಗಳೂ ತಿಲಕ ಧರಿಸುವುದರಿಂದ ದೇವಸ್ಥಾನದ ಪ್ರತಿಷ್ಠೆ ಇನ್ನೂ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪರಿಪಾಠವನ್ನು ಕಾರ್ತೀಕ ಮಾಸದಿಂದ ಯಾರಾದರೂ ಪಾಲಿಸಲು ವಿಫಲರಾದರೆ ಅವರನ್ನು ಟಿಟಿಡಿಯಿಂದಲೇ ಕಿತ್ತುಹಾಕಲಾಗುವುದು ಎಂದು ಮಾಜಿ ಎಕ್ಸಿಕ್ಯೂಟಿವ್ ಆಫೀಸರ್ ಪಿ.ವಿ.ಆರ್.ಕೆ. ಪ್ರಸಾದ್ ಅವರು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಕೆಲಸ ಉಳಿಸಿಕೊಳ್ಳಬೇಕಿದ್ದರೆ ಎಲ್ಲ ಸಿಬ್ಬಂದಿಗಳೂ ನಾಮ ಹಾಕಿಕೊಳ್ಳಲೇಬೇಕು.
ಸಿಬ್ಬಂದಿಗಳು ಮಾತ್ರವಲ್ಲ ತಿರುಪತಿಗೆ ದಿನನಿತ್ಯ ಬರುವ ಲಕ್ಷಾಂತರ ಭಕ್ತಾದಿಗಳೆಲ್ಲ ಈ ನಾಮವನ್ನು ಹಾಕಿಕೊಳ್ಳಲೇಬೇಕು. ಹಾಕಿಕೊಂಡವರಿಗೆ ಮಾತ್ರ ಪ್ರವೇಶವೆಂದು ಪತ್ರಿಕೆಯೊಂದರಲ್ಲಿ ಸೋಮವಾರ ಪ್ರಕಟವಾಗಿದ್ದು, ಭಕ್ತರನ್ನು ಭಾರೀ ಗೊಂದಲಕ್ಕೆ ನೂಕಿತ್ತು. ಈಗ, ಸಿಬ್ಬಂದಿಗಳು ಮಾತ್ರ ನಾಮ ಹಾಕಿಕೊಳ್ಳಬೇಕೆಂಬುದು ಅಧಿಕೃತವಾಗಿದೆ. ಭಕ್ತಾದಿಗಳು ಎಂದಿನಂತೆ ದೇವಸ್ಥಾನ ಪ್ರವೇಶಿಸಬಹುದು.
ಜ.1ಕ್ಕೆ ದರ್ಶನಕ್ಕಾಗಿ ವಿಶೇಷ ಟಿಕೆಟ್ : 2013ರ ಹೊಸವರ್ಷದ ಮೊದಲ ದಿನ ಜನವರಿ 1ರಂದು ಏಳುಕೊಂಡಲವಾಡ ಗೋವಿಂದನ ವಿಶೇಷ ದರ್ಶನ ಪಡೆಯಬೇಕೆನ್ನುವವರಿಗಾಗಿ ಟಿಟಿಡಿ ನವೆಂಬರ್ 7ರಂದು ಕೇವಲ 50 ರು.ಗಳ ವಿಶೇಷ ಟಿಕೆಟ್ಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸವರ್ಷದ ದಿನದಂದು ಸಾಗರೋಪಾದಿಯಲ್ಲಿ ಬರುವ ಭಕ್ತಾದಿಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಟಿಕೆಟ್ಗಳನ್ನು ದೇಶದಾದ್ಯಂತ ಇರುವ 'ಈ-ದರ್ಶನ' ಕೌಂಟರಲ್ಲಿ ಪಡೆಯಬಹುದಾಗಿದೆ. ಕೋಟಾ ಇರುವಷ್ಟೇ ಟಿಕೆಟ್ಗಳನ್ನು ಮಾರಲಾಗುವುದು ಎಂದು ಟಿಟಿಡಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಆಧ್ಯಾತ್ಮಿಕ ಗ್ರಂಥಾಲಯ ಸ್ಥಾಪನೆ : ಹಿಂದೂ ಸನಾತನ ಧರ್ಮದ ಜ್ಞಾನ ಸಮೃದ್ಧವಾಗಿರುವ ಪುರಾತನ ಗ್ರಂಥಗಳನ್ನು ಕಾಪಾಡುವ ಮತ್ತು ಮುಂದಿನ ಪೀಳಿಗೆಗಳಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದ ಆಂಧ್ರಪ್ರದೇಶದ ಪ್ರತಿ ಜಿಲ್ಲೆಗಳಲ್ಲಿ ಆಧ್ಯಾತ್ಮಿಕ ಗ್ರಂಥಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಎಕ್ಸಿಕ್ಯೂಟಿವ್ ಆಫೀಸರ್ ಎಲ್ ವಿ ಸುಬ್ರಮಣ್ಯಂ ಅವರು ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ತಿಳಿಯುವಂತಹ ಪುಸ್ತಕಗಳನ್ನು ಈ ಗ್ರಂಥಾಲಯಗಳಲ್ಲಿ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications