12.12.2012 ಪ್ರಳಯದ ಬಗ್ಗೆ ಕೋಡಿಮಠಶ್ರೀ ಹೇಳಿದ್ದೇನು?

12.12.2012ರಂದು ಭೂಮಿ ಪ್ರಳಯವಾಗುತ್ತದೆ, ಜೀವಕಣಗಳು ನಾಶವಾಗುತ್ತದೆ, ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ನಿಷ್ಕ್ರಿಯವಾಗಿ, ಭಸ್ಮವಾಗುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಆದರೆ, ಜನರು ಇದರಿಂದ ವಿಚಲಿತರಾಗುವುದು ಬೇಡ. ಯಾವುದೇ ಕಾರಣಕ್ಕೂ ದೇಶದಲ್ಲಿ ಪ್ರಳಯ ಸಂಭವಿಸುವುದಿಲ್ಲ.
ಮಯಾ ಜನಾಂಗದ ಭವಿಷ್ಯದಂತೆ ಡಿಸೆಂಬರ್ 21, 2012ಕ್ಕೆ ಪ್ರಳಯವಾಗಲಿದೆ. 12.12.2012 ರಂದು ಇದರ ಮೊದಲ ಸೂಚನೆ ಸಿಗಲಿದ್ದು, ಅಂದಿಗೆ ಮಾಯನ್ ಕ್ಯಾಲೆಂಡರ್ ಕೊನೆಗೊಳ್ಳಲಿದೆ.
ಡಿ.21 ರಂದು 6 ಗಂಟೆ ನಂತರ ಪ್ರಳಯ ಗ್ಯಾರಂಟಿ ಎಂದು ಎಲ್ಲೆಡೆ ನಂಬಲಾಗಿದೆ. ಆದರೆ, ಡಿ.12, 21 ಬರೀ ದಿನಾಂಕಗಳಾಗಿದ್ದು, ಖಗೋಳ ಕೌತುಕವಾಗಲಿ, ಹವಾಮಾನ ವೈಪರೀತ್ಯವಾಗಲಿ ಜಗತ್ತಿನ ಪ್ರಳಯಕ್ಕೆ ಕಾರಣವಾಗುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಪ್ರಪಂಚದ ಯಾವುದೋ ಮೂಲೆಯಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆಯಾದರೂ, ಇಡೀ ಭೂಮಂಡಲ ನಾಶವಾಗುವ ಸಾಧ್ಯತೆ ಇಲ್ಲವೇ ಇಲ್ಲ. ಸಾರ್ವಜನಿಕರು ಭಯ ಪಡದೆ ಧೈರ್ಯವಾಗಿ ತಮ್ಮ ದೈನಂದಿನ ಕಾರ್ಯದಲ್ಲಿ ತೊಡಗಬಹುದು ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಸೂರ್ಯ ತನ್ನ ಪಥವನ್ನು ಬದಲಿಸುವುದರಿಂದ ಪ್ರಾಕೃತಿಕ ಬದಲಾವಣೆಗಳು ನಿರೀಕ್ಷಿತವಾಗಿದೆ. ಆದರೆ, ಇದನ್ನೇ ಮಾಧ್ಯಮಗಳು ವೈಭವೀಕರಿಸಿ ಜನರ ನಿದ್ದೆಗೆಡಿಸುವುದು ಬೇಡ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.
ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟದ ಮೇಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಲಿತಾ ಸಹಸ್ರನಾಮ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೋಡಿಮಠ ಶ್ರೀಗಳು ಆಶೀರ್ವಚನ ನೀಡಿದರು.
ಬಾಗಲಕೋಟೆಯ ಬನಹಟ್ಟಿಯ ರಾಜಶೇಖರ ಮಹಾದೇವಪ್ಪ ಬಿದರಿ ಅವರ ನಿವಾಸದಲ್ಲಿ ಆಗಸ್ಟ್ ತಿಂಗಳಿನಲ್ಲೂ ಇದೇ ರೀತಿ ಸ್ವಾಮೀಜಿಗಳು ಅಭಯ ನೀಡಿದ್ದರು.
ಪ್ರತಿ 770 ವರ್ಷಗಳಿಗೊಮ್ಮೆ ಸೂರ್ಯನ ಪಥ ಬದಲಾಗುತ್ತದೆ. ಭೂಮಧ್ಯೆ ರೇಖೆಗೆ ಸಮೀಪವಾಗುವ ಸೂರ್ಯನಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಶಾಖದ ಕಾರಣಕ್ಕೆ ಹಿಮ ಭಾರಿ ಪ್ರಮಾಣದಲ್ಲಿ ಕರಗುತ್ತದೆ. ಇದು ಪ್ರಕೃತಿ ವಿಕೋಪಕ್ಕೆ ತಿರುಗಿ ಶೀತಲ ರಾಷ್ಟ್ರಗಳಿಗೆ ತೊಂದರೆ ಆಗುವುದು ಸಹಜ'
ಹೆಚ್ಚುತ್ತಿರುವ ಅಂತರ್ಜಲದ ಬಳಕೆಯ ಕಾರಣಕ್ಕೆ ಶಿಲಾಗೋಳಕ್ಕೆ ತೀವ್ರ ಧಕ್ಕೆ ಆಗುತ್ತಿದೆ. ಇದರಿಂದ ಭೂಕಂಪದ ತಡೆಗೆ ಅಂತರ್ಜಲ ಬಳಕೆ ತಡೆಗಟ್ಟಬೇಕು. ಇಲ್ಲವಾದಲ್ಲಿ ಅಪಾಯ ಶತಸಿದ್ಧ' ಕಾರ್ತಿಕ ಮಾಸದೊಳಗೆ ಗಂಭೀರ ಅವಘಡವೊಂದು ಕಾದಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಪಟಿ ಕಾವಿಧಾರಿಗಳ ಬಗ್ಗೆ : ಹಿಂದೂ ಸಂಪ್ರದಾಯದಲ್ಲಿ ಕಾವಿಧಾರಿಗಳಿಗೆ ವಿಶಿಷ್ಟ ಸ್ಥಾನವಿದೆ. ಕೆಲವು ಕಪಟಿಗಳು ವೈಯಕ್ತಿಕ ಸುಖಕ್ಕಾಗಿ ಕಾವಿಯ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಧರ್ಮಕ್ಕೆ ಮಸಿ ಬಳಿದಿದ್ದಾರೆ ಎಂದು ಕಾಳಿಕಾ ಮಠದ ಸ್ವಾಮೀಜಿ ಹೆಸರು ಹೇಳದೆ ಟೀಕಿಸಿದರು.
ಮನುಷ್ಯನ ಬದುಕಿನ ಎಲ್ಲಾ ಸುಖಗಳನ್ನು ತ್ಯಾಗ ಮಾಡಿ, ತೊಡುವ ಕಾವಿ ಬಟ್ಟೆ ನೊಂದವರ ಬಾಳಿನ ದೀಪವಾಗಬೇಕು. ಕಪಟಿಗಳಿಂದ ಸನ್ಯಾಸಿಗಳು ಸಮಾಜದಲ್ಲಿ ತಲೆ ತಗ್ಗಿಸುವಂತಾಗಬಾರದು.
ಸ್ವಾಮೀಜಿಯಾಗಿ ದೀಕ್ಷೆ ತೆಗೆದುಕೊಂಡ ಮೇಲೆ ತಮ್ಮ ಸುಖವನ್ನು ತ್ಯಜಿಸಬೇಕು. ಲೋಕದ ಕಲ್ಯಾಣ ಕಾರ್ಯಕ್ಕಾಗಿ ದುಡಿಯಬೇಕು. ಸುಳ್ಳು, ಭ್ರಷ್ಟತೆ ಹಾಗೂ ಆಸೆಯಿಂದ ದೂರ ಉಳಿಯಬೇಕಿದು ಎಂದು ಸ್ವಾಮೀಜಿ ಹೇಳಿದರು.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ












Click it and Unblock the Notifications