ಚರಂಡಿ ಪಾಲಾದ ರಥ- ಬೆಂಗಳೂರು ಟೆಕ್ಕಿ ಸಾವು

ಒಂದು ಶತಮಾನದಿಂದಲೂ ತಾಲೂಕಿನ ಲೋಕಾಪುರದ ಜನತೆಗೆ ವೆಂಕಟೇಶ್ವರ ರಥೋತ್ಸವ ಅಂದರೆ ಬಹಳ ಭಕ್ತಿ. ಇಡೀ ಸುತ್ತಮುತ್ತಲ ಊರಿನವರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಉದ್ಯೋಗವನ್ನರಸಿ ಪರಸ್ಥಳಗಳಿಗೆ ಹೋದವರೂ ವರ್ಷಕ್ಕೊಮ್ಮೆ ಈ ರಥೋತ್ಸವದಲ್ಲಿ ಹಾಜರಾಗುವುದು ಸಂಪ್ರದಾಯ.
ಹಾಗೆಂದೇ ಮೊನ್ನೆ ವಿಜಯದಶಮಿಯಂದು ವೆಂಕಟೇಶ್ವರನ ರಥೋತ್ಸವ ನಡೆದಿತ್ತು. ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ವಿಠ್ಠಲ ಭೀಮಸೇನ ಬಬಲಾದಿ (35) ಹುಟ್ಟೂರಾದ ಲೋಕಾಪುರಕ್ಕೆ ಸಂಭ್ರಮದಿಂದ ತೆರಳಿದ್ದರು. ಆದರೆ ಅಲ್ಲಿಂದ ಅವರು ಮರಳಿ ಬಾರದ ಲೋಕಕ್ಕೆ ಜಾರಿಕೊಂಡಿದ್ದಾರೆ.
ವಿಠ್ಠಲ ಭೀಮಸೇನರ ತಂದೆ ಗ್ರಾಮದ ದೇಸಾಯಿ ಗಲ್ಲಿಯಲ್ಲಿರುವ ವೇಂಕಟೇಶ್ವರ ದೇವಸ್ಥಾನದ ಅರ್ಚಕರೂ ಹೌದು. ಹಾಗಾಗಿ, ವಿಠ್ಠಲ ಭೀಮಸೇನ ಅಪ್ಪನ ಪಕ್ಕದಲ್ಲೆ ಭಕ್ತಿಯಲ್ಲಿ ತನ್ಮಯನಾಗಿ ಕುಳಿತಿದ್ದಾಗ ಜವರಾಯ ಬಂದು ಆತನನ್ನು ಎಳೆದುಕೊಂಡು ಹೋಗಿದ್ದಾನೆ. ಆತ ಕುಳಿತಿದ್ದ ರಥ ಯಾವುದೋ ಮಾಯದಲ್ಲಿ ಸೀದಾ ಚರಂಡಿಗೆ ಇಳಿದು ಅನಾಹುತ ಸಂಭವಿಸಿದೆ.
ರಥ ಚರಂಡಿಗೆ ಇಳಿಯುತ್ತಿದ್ದ ಅದರ ಮೇಲೆ ಕುಳಿತಿದ್ದವರು ಕೆಳಗೆ ಉರುಳಿದ್ದಾರೆ. ವಿಠ್ಠಲ ಭೀಮಸೇನ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಇತರೆ 8 ಮಂದಿಗೂ ತೀವ್ರವಾದ ಗಾಯಗಳಾಗಿವೆ. ಗಾಯಾಳುಗಳನ್ನು ಬಾಗಲಕೋಟೆ ಹಾಗೂ ಮುಧೋಳದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ರಥಬೀದಿಯು ಇಕ್ಕಟ್ಟಾಗಿದ್ದರಿಂದ ರಥ ಎಳೆಯುವವರಿಗೆ ನಿಯಂತ್ರಣ ತಪ್ಪಿ ರಥ ಚರಂಡಿಗಿಳಿಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಥ ವಾಲುತ್ತಿದ್ದಂತೆಯೇ ಮೇಲಿನಿಂದ ಬೀಳುತ್ತೇನೆ ಎಂಬ ಭಯದಿಂದ ರಥದ ಮೇಲೆ ಕುಳಿತಿದ್ದ ವಿಠ್ಠಲ ಭೀಮಸೇನ ರಥದಿಂದ ಜಿಗಿದಿದ್ದಾರೆ. ಗೋಡೆ ಮತ್ತು ರಥದ ಮಧ್ಯೆ ಸಿಲುಕಿದಾಗ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲಿಯೇ ವಿಠ್ಠಲ ಭೀಮಸೇನ ಸಾವನ್ನಪ್ಪಿದರು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications