ರೀಬಾಕ್ 870 ಕೋ ವಂಚನೆ ಪ್ರಕರಣ, ಆರೋಪಿ ಸೆರೆ

ವಂಚನೆ, ಕಂಪನಿ ನಿಯಮ ಉಲ್ಲಂಘನೆ,ಫೋರ್ಜರಿ ಆರೋಪದ ಮೇಲೆ ಮಾಜಿ ಎಂಡಿ ಸುಭಿಂದರ್ ಸಿಂಗ್ ಪ್ರೇಮ್, ಮಾಜಿ ಸಿಒಒ ವಿಷ್ಣು ಭಗತ್ ಅವರ ಮೇಲೆ ಆರೋಪ ಹೊರೆಸಲಾಗಿತ್ತು. ನಂತರ ಗುರ್ ಗಾಂವ್ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಮಾ.26, 2012ಕ್ಕೆ ಈ ಇಬ್ಬರು ಸಂಸ್ಥೆಯನ್ನು ತೊರೆದಿದ್ದರು.
ಮಾಜಿ ವ್ಯವಸ್ಥಾಪಕ ನಿರ್ದೇಶಕ ಸುಭಿಂಧರ್ ಸಿಂಗ್, ಮಾಜಿ ಸಿಒಒ ವಿಷ್ನು ಭಗತ್, ಸಂಜಯ್ ಮಿಶ್ರಾ, ಪ್ರಶಾಂತ್ ಭಟ್ನಾಗರ್ ಹಾಗೂ ಸುರಕ್ಷಿತ್ ಭರ್ ಅವರನ್ನು ಬಂಧಿಸಲಾಗಿದೆ ಎಂದು ಎಸಿಪಿ ಭೂಪಿಂಧರ್ ಸಿಂಗ್ ಹೇಳಿದ್ದಾರೆ.
ಸುಮಾರು 16 ವರ್ಷಗಳ ರಿಬಾಕ್ ಸಂಸ್ಥೆಯಲ್ಲಿದ್ದ ಈ ಇಬ್ಬರು ಆರೋಪಿಗಳು ಗುಪ್ತವಾಗಿ ನಾಲ್ಕು ವೇರ್ ಹೌಸ್ ಗಳನ್ನು ನಡೆಸುತ್ತಿದ್ದರು. ರಿಬಾಕ್ ಸಂಸ್ಥೆಯ ಷೇರುಗಳ ಮೊತ್ತ ಕದ್ದಿರಿಸಲು ಈ ವೇರ್ ಹೌಸ್ ಗಳನ್ನು ಬಳಸುತ್ತಿದ್ದರು.
ರೀಬಾಕ್ ಹಾಗೂ ಅಡಿಡಾಸ್ ಸಮೂಹ ಸುಮಾರು 40,000 ಜನರ ಉದ್ಯೋಗದ ಮೇಲೆ ನೇರ ಅಥವಾ ಪರೋಕ್ಷವಾಗಿ ಈ ವಂಚನೆ ಪ್ರಭಾವ ಬೀರಲಿದೆ ಎಂದು ಸಂಸ್ಥೆಯ ಆರ್ಥಿಕ ನಿರ್ದೇಶಕ ಶಮೀಂ ಪಡತ್ ದೂರು ನೀಡಿದ್ದರು.
ಈ ಇಬ್ಬರು ಮಾಜಿ ಉದ್ಯೋಗಿಗಳ ಮೇಲೆ ಐಪಿಸಿ ಸೆಕ್ಷನ್ 406/408, 467/468, 477A ಹಾಗೂ 120B ಅನ್ವಯ ಪ್ರಕರಣ ದಾಖಲಾಗಿತ್ತು.
ಪೊಲೀಸ್ FIR ಕಾಪಿ ನೋಡಿದ ಆರೋಪಿಗಳು ಹೆಚ್ಚುವರಿ ಸೊನ್ನೆ ಸೇರಿರುವುದನ್ನು ನೋಡಿ ಸ್ವತಃ ಆರೋಪಿಗಳು ಹೌಹಾರಿದ್ದರು.
ನಂತರ ಪೊಲೀಸರು ಕೂಡಾ ಮತ್ತೊಮ್ಮೆ FIR ಕಾಪಿ ಪರೀಶಿಲಿಸಿ ಅವ್ಯವಹಾರದ ಮೊತ್ತ 8700 ಕೋಟಿ ರು ಅಲ್ಲ 870 ಕೋಟಿ ರು ಎಂದು ತಿದ್ದಿದ್ದರು. ಇದು typographical error ಸರಿಯಾದ ಮೊತ್ತವನ್ನು ದಾಖಲಿಸಲಾಗಿದೆ ಎಂದು ಗುರ್ ಗಾಂವ್ ವಿಶೇಷ ತನಿಖಾ ದಳ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications