ಇಸ್ಲಾಂ ವಿರೋಧಿ ವಿಡಿಯೋ ಯೂ ಟ್ಯೂಬ್ ನಿಷೇಧ

ವಿಡಿಯೋ ಚಿತ್ರ ಖಂಡಿಸಿ ಯುಎಸ್ ವಿರೋಧಿ ಪ್ರತಿಭಟನೆಗಳು ವಿಶ್ವದಾದ್ಯಂತ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ ಟೆಲಿಕಮ್ಯೂನಿಕೇಷನ್ ಅಥಾರಿಟಿಗೆ ವಿಡಿಯೋ ಪ್ರಸಾರ ನಿರ್ಬಂಧಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಲಭ್ಯ ಮಾಹಿತಿ ಪ್ರಕಾರ ಪಿಟಿಎ ನೀಡಿದ ನಿರ್ದೇಶನಗಳನ್ನು ಯೂಟ್ಯೂಬ್ ತಿರಸ್ಕರಿಸಿತ್ತು, ಹಾಗೂ ವಿವಾದಿತ ವಿಡಿಯೋ ಪ್ರಸಾರ ಅಬಾಧಿತವಾಗಿ ನಡೆಯುತ್ತಿತ್ತು.
ಸುಪ್ರೀಂಕೋರ್ಟ್ ಆದೇಶದ ನಂತರ ಹೇಳಿಕೆ ನೀಡಿರುವ ಪಾಕಿಸ್ತಾನ ಸರ್ಕಾರ, ಇದು ವಿವಾದಿತ 700ಕ್ಕೂ ಅಧಿಕ ವಿಡಿಯೋ ಲಿಂಕ್ ಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಯೂಟ್ಯೂಬ್ ಅಥವಾ ಫೇಸ್ ಬುಕ್ ನಿಷೇಧಿಸುವುದಿಲ್ಲ.
ಇಸ್ಲಾಂ ವಿರೋಧಿ ಪಠ್ಯ, ಚಿತ್ರ ಹಾಗೂ ವಿಡಿಯೋ ತುಣುಕುಗಳನ್ನು ಮಾತ್ರ ತೆಗೆದುಹಾಕಲಾಗುತ್ತದೆ ಎಂದು ಹೇಳಿದೆ.
ಭಾರತದಲ್ಲೂ ನಿರ್ಬಂಧ: ವಿವಾದಿತ ಚಿತ್ರದ ದೆಸೆಯಿಂದ ಜಗತ್ತಿನೆಲ್ಲೆಡೆ ಪ್ರತಿಭಟನೆ, ಹಿಂಸಾಚಾರ ಆರಂಭವಾಗಿ ಲಿಬಿಯಾ ದೇಶದ ಯುಎಸ್ ರಾಯಭಾರಿ ಹತ್ಯೆಯಾದ ನಂತರ ಗೂಗಲ್ ಇಂಡಿಯಾ ಎಚ್ಚೆತ್ತುಕೊಂಡಿದೆ.
ಭಾರತದಲ್ಲಿ ಇಸ್ಲಾಂ ವಿರೋಧಿ ಚಿತ್ರವನ್ನು ನಿಷೇಧಿಸಿರುವುದಾಗಿ ಹೇಳಿಕೊಂಡಿದೆ. ಆದರೆ, ಗೂಗಲ್ ಸರ್ಚ್ ನಲ್ಲಿ ಚಿತ್ರದ ಕ್ಲಿಪ್ಪಿಂಗ್ ಗಳು ಕಾಣಿಸಿಕೊಂಡಿತ್ತು.
ಭಾರತ, ಇಂಡೋನೇಷಿಯಾ, ಲಿಬಿಯಾ ಹಾಗೂ ಈಜಿಪ್ಟ್ ಸೇರಿದಂತೆ ಹಲವು ದೇಶಗಳಲ್ಲಿ ಈ ವಿಡಿಯೋ ಪ್ರಸಾರ ನಿರ್ಬಂಧಿಸಲಾಗಿದೆ. ಯೂಟ್ಯೂಬ್ ನಿಯಮಾವಳಿಗೆ ಧಕ್ಕೆ ತರುವಂತೆ ಇದ್ದರೆ ವಿಡಿಯೋ ತುಣುಕನ್ನು ಸಂಪೂರ್ಣವಾಗಿ ಕಿತ್ತುಹಾಕಲಾಗುತ್ತದೆ ಎಂದು ವೈಟ್ ಹೌಸ್ ನ ಅಧಿಕಾರಿಗಳಿಗೆ ಗೂಗಲ್ ಪ್ರತಿಕ್ರಿಯಿಸಿತ್ತು.
ಯುಎಸ್ ಮೂಲದ ನಿರ್ದೇಶಕ ತೆಗೆದಿರುವ ಈ ಚಿತ್ರದಲ್ಲಿ ಪ್ರವಾದಿ ಮಹಮ್ಮದ್ ಅವರನ್ನು ವಂಚಕ, ಶಿಶು ಕಾಮ ಪ್ರಚೋದಕ ಎಂಬಂತೆ ಚಿತ್ರಿಸಿ ಅವಹೇಳನ ಮಾಡಲಾಗಿತ್ತು. ಮಧ್ಯಪ್ರಾಚ್ಯ ದೇಶಗಳಲ್ಲಿ ವಿಡಿಯೋ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ.
ಇಸ್ಲಾಂ ಧರ್ಮಗುರುಗಳ ಅವಹೇಳನ ಮಾಡಿರುವ ಆರೋಪ ಹೊತ್ತಿರುವ ಚಿತ್ರ ನಿರ್ದೇಶಕ ಸ್ಯಾಮ್ ಬಾಸಿಲ್ ನಾಪತ್ತೆಯಾಗಿದ್ದಾರೆ.
56 ವರ್ಷದ ಬಾಸಿಲ್ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಇಸ್ರೇಲಿ ಯಹೂದಿಯಾಗಿದ್ದು ತನ್ನ ಚಿತ್ರದ ಮೂಲಕ ಇಸ್ಲಾಂ ಧರ್ಮದ ನೂನ್ಯತೆಗಳನ್ನು ಸರಿಪಡಿಸಬಹುದು ಎಂದು ಹೇಳಿಕೆ ನೀಡಿದ್ದಾರೆ. ಅರೇಬಿಕ್ ಗೆ ಇವರ ಹೇಳಿಕೆಗಳು ತರ್ಜುಮೆಗೊಂಡು ಯೂಟ್ಯೂಬ್ ಪ್ರವೇಶಿಸಿತ್ತು.
ಬಾಸಿಲ್ ಹೇಳಿಕೆ ಹಾಗೂ ಚಿತ್ರವನ್ನು ವೀಕ್ಷಿಸಿದ ಮುಸ್ಲಿಮರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. 'ಇಸ್ಲಾಂ ಕ್ಯಾನ್ಸರ್ ಇದ್ದಂತೆ' ಎಂದು ಹೇಳಿಕೆ ನೀಡಿರುವ ಬಾಸಿಲ್ ಗೆ ಯಾರೂ ಆಶ್ರಯ ನೀಡಬಾರದು ಬಾಸಿಲ್ ನಮ್ಮ ವಶಕ್ಕೆ ಒಪ್ಪಿಸಿ ಎಂದು ಆಕ್ರೋಶ ಭರಿತ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications