ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಬಿಎಂಪಿ ಕಸ ವಾಹನ ಭೀಕರ ಡಿಕ್ಕಿ: ಒಂದು ಸಾವು
ಮಹಾದೇವಪುರದ ಮಂಡೂರು ಸಮೀಪ ಕಸ ವಿಲೇವಾರಿ ಘಟಕಕ್ಕೆ ಕಸ ಸಾಗಿಸುವಾಗ ಮೇಡಹಳ್ಳಿ ಸೇತುವೆಯ ಬಳಿ ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಘಟನೆಯಿಂದ ಲಾರಿ ಚಾಲಕ ಪಂಚಾಲಯ್ಯ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ಲಾರಿಯಲ್ಲಿದ್ದ ಇನ್ನೋರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಎರಡೂ ಲಾರಿಗಳ ಮುಂಭಾಗ ತೀವ್ರವಾಗಿ ನುಜ್ಜುಗುಜ್ಜಾಗಿದೆ.
ಅಪಘಾತಕ್ಕೀಡಾದ ಈ ಲಾರಿಗಳು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಗೆ ಸೇರಿದ ಲಾರಿಗಳಾಗಿವೆ ಎನ್ನಲಾಗಿದೆ. ಈ ಬಗ್ಗೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯರಾಂ ಹೆಚ್ಚುವರಿ ಪೊಲೀಸ್ ಆಯುಕ್ತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Comments
English summary
The garbage trucks belonging to Bruhat Bangalore Mahanagara Palike (BBMP) met with deadly accident near Mandur killing a driver Pamchalayya on the spot today Sept 10.