ಒಲಿಂಪಿಕ್ಸ್ ಮುಕ್ತಾಯಕ್ಕೆ ಮಸಾಲೆ ಹುಡುಗಿಯರ ಒಗ್ಗರಣೆ
ಲಂಡನ್, ಆ.12: ಜಾಗತಿಕ ಕ್ರೀಡಾ ಹಬ್ಬ ಲಂಡನ್ ಒಲಿಂಪಿಕ್ಸ್ 2012 ತನ್ನ 17 ದಿನಗಳ ಸಂಭ್ರಮಕ್ಕೆ ಭಾನುವಾರ(ಆ.12) ಮಧ್ಯರಾತ್ರಿ ತೆರೆ ಎಳೆಯಲಿದೆ. ಸಮಾರೋಪ ಸಮಾರಂಭದ ರಂಗೇರಿಸಲು ವಿಶ್ವಖ್ತ್ಯಾತ ಪಾಪ್ ತಂಡ ಸ್ಪೈಸ್ ಗರ್ಲ್ಸ್ ಒಗ್ಗೂಡಿ ಹಾಡಿ ಕುಣಿದಾಡಲಿದ್ದಾರೆ. ಸುಮಾರು 300 ಕ್ಕೂ ಅಧಿಕ ದೇಶಗಳು ಭಾಗವಹಿಸಿದ್ದ ಈ ಜಾಗತಿಕ ಟೂರ್ನಿ ವಿದಾಯದ ಹೊಸ್ತಿಲಲ್ಲಿದೆ.
ಕಳೆದ ಒಲಿಂಪಿಕ್ಸ್ ಗೆ ಹೋಲಿಸಿದರೆ ಭಾರತ ಉತ್ತಮ ಸಾಧನೆಯೊಂದಿಗೆ ಮುಕ್ತಾಯ ಹಾಡಲಿದೆ. 2016ರಲ್ಲಿ ಬ್ರೆಜಿಲ್ ನ ರಿಯೋಡಿಜೆನಿರೋದಲ್ಲಿ ಮುಂದಿನ ಒಲಿಂಪಿಕ್ಸ್ ಸ್ಪರ್ಧೆಗಳು ನಡೆಯಲಿದೆ. ಲಂಡನ್ ಒಲಿಂಪಿಕ್ಸ್ ಆಯೋಜಕರು ಒಲಿಂಪಿಕ್ಸ್ ಜ್ಯೋತಿಯನ್ನು ರಿಯೋಡಿಜೆನಿರೋ ಸಂಘಟಕರಿಗೆ ಹಸ್ತಾಂತರಿಸುವ ಮೂಲಕ ಸಮಾರೋಪ ಸಮಾರಂಭಕ್ಕೆ ತೆರೆ ಬೀಳಲಿದೆ.ಉದ್ಘಾಟನಾ ಸಮಾರಂಭವನ್ನು ಮೀರಿಸುವಂಥ ಸಮಾರೋಪ ಸಮಾರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಉದ್ಘಟನಾ ಸಮಾರಂಭ ಮದುವೆ ದಿನವಾದರೆ, ಸಮಾರೋಪ ಮದುವೆ ಆರತಕ್ಷತೆ ರೀತಿ ಇರುತ್ತದೆ ಎಂದು ಆಯೋಜಕರು ಹೇಳಿದ್ದಾರೆ.
ಸುಮಾರು 4,100 ಕಲಾವಿದರು ಲಂಡನ್ ಗೇಮ್ಸ್ ಮೈದಾನದಲ್ಲಿ ವರ್ಣರಂಜಿತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.ಲಂಡನ್ನಿನ ಸಿಂಫೋನಿ ಆರ್ಕೆಸ್ಟ್ರಾ ದಿನದ ಆಕರ್ಷಣೆಯಾಗಲಿದೆ. ಪ್ರಿನ್ಸೆಸ್ ಡಯಾನಾ ಸ್ಮಾರಕ ಉತ್ಸವ ಆಯೋಜಿಸಿದ್ದ ನಿರ್ದೇಶಕ ಕಿಮ್ ಗಾವಿನ್ ಅವರ ಕಲಾ ನಿರ್ದೇಶನದಲ್ಲಿ ಲೇಡಿ ಗಾಗಾರಿಂದ ಹಿಡಿದು ರಾಯಲ್ ಒಪೇರಾ ತನಕ ಪ್ರದರ್ಶನದ ಪಟ್ಟಿಯಲ್ಲಿ ಸೇರಿದ್ದಾರೆ.
ಭಾರತದ ಧ್ವಜಧಾರಿಯಾಗಿ ಕಂಚಿನ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಅವರು ಆಯ್ಕೆಯಾಗಿದ್ದಾರೆ. 18 ಚಿನ್ನ ಸೇರಿದಂತೆ ಒಲಿಂಪಿಕ್ಸ್ ಇತಿಹಾಸದಲ್ಲಿ 22 ಪದಕ ಗೆದ್ದಿರುವ ಅಮೆರಿಕದ ಈಜುಗಾರ ಮೈಜಲ್ ಫೆಲ್ಶ್ಸ್ ಅವರ ನಿವೃತ್ತಿ. 100 ಮೀ, 200 ಮೀ ಹಾಗೂ 4 x 100 ರಿಲೇ ಚಿನ್ನ ಗೆದ್ದ ಅಪೂರ್ವ ಸಾಧನೆ ಮೆರೆದ ಉಸೇನ್ ಬೋಲ್ಟ್ ಈ ಬಾರಿ ಸ್ಮರಣೀಯ ಅಥ್ಲೀಟ್ ಗಳಾಗಿದ್ದಾರೆ.
ದಿನದ ವಿಶೇಷ: ಅಂತಿಮ ದಿನದ ಕ್ರೀಡೆಗೂ ಮುನ್ನ ವಿಶ್ವದ ಏಕೈಕ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಹೊಸ ವಿಶ್ವ ದಾಖಲೆ(36.84 ಸೆ) ಯೊಂದಿಗೆ 4 X 100 ರಿಲೇಯನ್ನು ಮುಗಿಸಿದ್ದು ವಿಶೇಷ.
ಫುಟ್ಭಾಲ್ ಪ್ಫೈನಲ್ ನಲ್ಲಿ ಮೆಕ್ಸಿಕೋ ತಂಡ ಬ್ರೆಜಿಲ್ ತಂಡವನ್ನು ಮಣಿಸಿದ್ದು ಬ್ರೆಜಿಲ್ ಮತ್ತೊಮ್ಮೆ ತನ್ನ ನೆಲದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಚಿನ್ನಕ್ಕಾಗಿ ಕಾದಾಡಬೇಕಾದ ಪರಿಸ್ಥಿತಿ ತಂದಿದೆ. ಭಾರತದ ಸುಶೀಲ್ ಕುಮಾರ್ ಸತತ ಒಲಿಂಪಿಕ್ಸ್ ನಲ್ಲಿ ಪದಕ ಗಿಟ್ಟಿಸಿದ ಹಾಗೂ ಕುಸ್ತಿ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ













Click it and Unblock the Notifications