ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಡಿ ಹುಂಡಿಗೆ ಬೆಂಗಳೂರು ಭಕ್ತನ ಭರ್ಜರಿ ದಾನ

By Mahesh
|
Google Oneindia Kannada News

Shirdi Sai Baba
ಶಿರಡಿ, ಆ.7: ಭಾರತದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾದ ಶಿರಡಿ ಸಾಯಿಬಾಬಾ ದೇಗುಲಕ್ಕೆ ಬೆಂಗಳೂರಿನ ಭಕ್ತರೊಬ್ಬರು ಭರ್ಜರಿ ಕಾಣಿಕೆ ನೀಡಿದ್ದಾರೆ.

ಬೆಂಗಳೂರಿನ ಭಕ್ತರೊಬ್ಬರು ಸುಮಾರು 7.82 ಲಕ್ಷ ರು ಮೌಲ್ಯದ 320 ಗ್ರಾಂ ಚಿನ್ನವುಳ್ಳ ಕಿರೀಟವನ್ನು ನೀಡಿದ್ದಾರೆ. ಆದರೆ, ಅವರ ಹೆಸರು ಬಹಿರಂಗ ಪಡಿಸಲು ಇಚ್ಛಿಸಿದ್ದಾರೆ ಎಂದು ಸಾಯಿಬಾಬಾ ಟ್ರಸ್ಟ್ ಹೇಳಿದೆ.

ಬೆಲೆ ಬಾಳುವ ಹರಳು, ಮುತ್ತು ಖಚಿತ ಕಿರೀಟವನ್ನು ಬೆಂಗಳೂರು ಮೂಲದ ಶಿಕ್ಷಣತಜ್ಞರೊಬ್ಬರು ದಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಶ್ರಾವಣ ಮಾಸದ ಸೋಮವಾರ ದಿನದಂದು ಸಾಯಿಬಾಬಾಗೆ ಕಿರೀಟ ತೊಡಸಿದರೆ ಸರ್ವ ಸಂಕಷ್ಟಗಳು ದೂರಾಗಲಿದೆ ಎಂದು ದಾನಿಗಳಿಗೆ ಅವರ ಜ್ಯೋತಿಷಿಗಳು ಹೇಳಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಆಗಸ್ಟ್ ಮೊದಲ ವಾರದಲ್ಲಿ ಅನಾಮಿಕ ಭಕ್ತರೊಬ್ಬರು ಸುಮಾರು 1.18 ಕೋಟಿ ರು ಮೌಲ್ಯದ ಚಿನ್ನದ ಪೆಂಡೆಂಟ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಶಿರಡಿ ದೇಗುಲದ ಆದಾಯ ವಾರ್ಷಿಕವಾಗಿ ಶೇ.20ರಷ್ಟು ಏರಿಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಬ್ಬ ಹರಿದಿನ, ಗುರುವಾರಗಳಂದು ದೇಗುಲದ ಆದಾಯ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಕಳೆದ ಫ್ರೆಬವರಿ ಹೊತ್ತಿಗೆ ಸುಮಾರು 36 ಕೆಜಿ ಚಿನ್ನ ದೇಣಿಗೆ ಪಡೆದಿದ್ದ ಶಿರಡಿ ದೇಗುಲದ ಈ ತ್ರೈಮಾಸಿಕದ ವರದಿಯನ್ನು ಇನ್ನೂ ಶಿರಡಿ ಸಾಯಿ ದೇಗುಲ ಟ್ರಸ್ಟ್ ಬಿಡುಗಡೆ ಮಾದಿಲ್ಲ.

ಭಕ್ತಾದಿಗಳು ಹುಂಡಿಗೆ ಹಾಕಿರುವ ಮೊತ್ತದಲ್ಲಿ 36 ಕೆಜಿ ಚಿನ್ನ, 401 ಕೋಟಿ ರು ನಗದು ಲಭಿಸಿದೆ. 2010ರಲ್ಲಿ 31 ಕೆಜಿ ಚಿನ್ನವನ್ನು ಭಕ್ತಾದಿಗಳು ದೇವರಿಗೆ ಅರ್ಪಿಸಿದ್ದರು.
2010ರಲ್ಲಿ 320 ಕೆಜಿ ಬೆಳ್ಳಿ ಅರ್ಪಿಸಿದ್ದ ಭಕ್ತರು ಈ ವರ್ಷ 440 ಕೆಜಿ ಬೆಳ್ಳಿ ಹುಂಡಿಗೆ ಹಾಕಿದ್ದಾರೆ. ವಿದೇಶಿ ಹಣಗಳ ಮೊತ್ತದಲ್ಲೂ ಏರಿಕೆ ಕಂಡಿದ್ದು, 2010ರಲ್ಲಿ 5.43 ಕೋಟಿ ರು ಬಂದಿತ್ತು, ಈ ಬಾರಿ 6.28 ಕೋಟಿ ರು ಸಿಕ್ಕಿದೆ ಎಂದು ಟ್ರಸ್ಟಿ ಎಂ ಕಿಶೋರ್ ವಿವರಿಸಿದ್ದಾರೆ.

English summary
A devotee from Bangalore on Monday (Aug.6) donated a 320 gram gold 'crown' worth Rs 7.82 lakh to Saibaba temple, Shirdi, Maharashtra on the occasion of Shravan month auspicious day Shirdi Sai temple trust officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X