ಆ.1: ಆರ್ಚರಿ ನಂತರ ಟೆನಿಸ್, ಹಾಕಿ ತಂಡ ಹೊರಕ್ಕೆ

ಬಾಡ್ಮಿಂಟನ್ ನಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕರೂ, ಹಾಕಿ ತಂಡದ ವೈಫಲ್ಯ ಮುಂದುವರೆದಿದೆ. ಬುಧವಾರ(ಆ.1) ಭಾರತದ ಕ್ರೀಡಾಪಟುಗಳ ಏಳು ಬೀಳಿನ ಸಂಕ್ಷಿಪ್ತ ವಿವರಣೆ ಇಲ್ಲಿದೆ..
ಬಾಡ್ಮಿಂಟನ್: ಭಾರತದ ಭರವಸೆಯ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಲಂಡನ್ ಒಲಿಂಪಿಕ್ಸ್ ನ ಸಿಂಗಲ್ಸ್ ವಿಭಾಗದ ಕ್ವಾಟರ್ ಫೈನಲ್ ತಲುಪಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಹಾಲೆಂಡಿನ ಜಿ ಯುವೋ ಅವರನ್ನು 21-14,21-16ರ ನೇರ ಸೆಟ್ ಗಳಲ್ಲಿ ಸೋಲಿಸಿದರು. [ಆ.2: ಬಾಕ್ಸರ್ ಗಳ ಪಂಚ್ ನೋಡಲು ಮರೆಯದಿರಿ]
ಮಹಿಳಾ ಡಬಲ್ಸ್ ನಲ್ಲಿ ಉತ್ತಮ ಆಟ ಪ್ರದರ್ಶಿಸಿದರೂ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಜೋಡಿ ಬಿ ಗುಂಪಿನ ಕ್ವಾಟರ್ ಫೈನಲ್ ಹಂತ ತಲುಪಲು ವಿಫಲರಾದರು. ಬೇರೆ ಗುಂಪಿನಲ್ಲಿದ್ದ ಚೀನಾ, ಇಂಡೋನೇಶಿಯಾ ಹಾಗೂ ಮಲೇಶಿಯಾ ಆಟಗಾರರು ಕಳಪೆ ಆಟ, ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಅಮಾನತಾಗಿದ್ದಾರೆ. 1 ಅಂಕ ಕಡಿಮೆ ಹೊಂದಿರುವ ಭಾರತ ಜೋಡಿಯನ್ನು ಮುಂದಿನ ಹಂತಕ್ಕೆ ಕಳಿಸಲು ಒಲಿಂಪಿಕ್ಸ್ ಸಮಿತಿ ನಿರಾಕರಿಸಿದೆ.
ಟೆನಿಸ್ : ಮಹೇಶ್ ಭೂಪತಿ ಹಾಗೂ ರೋಹನ್ ಭೋಪಣ್ಣ ಜೋಡಿ ನಿರ್ಗಮನದ ನಂತರ ಭರವಸೆ ಹುಟ್ಟಿಸಿದ್ದ ಪೇಸ್ ಹಾಗೂ ವಿಷ್ಣುವರ್ಧನ್ ಅವರು ಕೂಡಾ ಒಲಿಂಪಿಕ್ಸ್ ಅಭಿಯಾನಕ್ಕೆ ಮುಕ್ತಾಯ ಹಾಡಿದ್ದಾರೆ.
ಫ್ರಾನ್ಸ್ ಜೋಡಿ ಸೋಂಗಾ ಹಾಗೂ ಲೋದ್ರಾ ಜೋಡಿಗೆ 6-7 (3) 6-4 3-6 ಅಂತರದಿಂದ ಶರಣಾಗಿದೆ. ಮಹೇಶ್ ಭೂಪತಿ ಅವರು 2016ರ ಬ್ರೆಜಿಲ್ ಒಲಿಂಪಿಕ್ಸ್ ನಲ್ಲಿ ಆಡುವುದಿಲ್ಲ. 5 ಬಾರಿ ಒಲಿಂಪಿಕ್ಸ್ ಪದಕಕ್ಕಾಗಿ ಯತ್ನಿಸಿ ಸೋತ್ತಿದ್ದೇನೆ ಎಂದು ಹೇಳಿದ್ದಾರೆ.
ಹಾಕಿ : ಕಳಪೆ ರಕ್ಷಣಾ ವಿಭಾಗ ನಿರ್ವಹಣೆಯಿಂದ ಹಾಕಿ ಇಂಡಿಯಾ ತಂಡ ಸತತ ಎರಡನೇ ಸೋಲು ಕಂಡಿದೆ. ಮೊದಲ ಗೋಲು ದಾಖಲಿಸಿ ಮುನ್ನಡೆ ಪಡೆದ ಭಾರತ ನಂತರ ಕಳಪೆ ಆಟ ಪ್ರದರ್ಶಿಸಿ, 1-3 ಅಂತರದಿಂದ ಸೋತು ಸುಣ್ಣವಾಗಿದೆ. ಹಾಲೆಂಡ್ ವಿರುದ್ಧ ಮೊದಲ ಪಂದ್ಯವನ್ನು 2-3 ಅಂತರದಿಂದ ಸೋತಿತ್ತು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications