ಆಕ್ಸೆಂಚರ್ ನಲ್ಲಿ ಈ ವರ್ಷ ನೇಮಕಾತಿ ಹಬ್ಬ

2 ಲಕ್ಷ ಚದರ ಅಡಿ ವಿಸ್ತೀರ್ಣದ ಮೂಲ ಸೌಕರ್ಯ ವುಳ್ಳ ಕಚೇರಿ ಸ್ಥಳದಲ್ಲಿ ಸುಮಾರು 2000 ಜನ ಕೆಲಸ ಮಾಡಬಹುದು. ERP, CRM, SCM, EAI (enterprise application integration), ಅನ್ವಯ ತಂತ್ರಾಂಶ ಅಭಿವೃದ್ಧಿ, ಐಟಿ ಮೂಲ ಸೌಕರ್ಯ, ಕೆಪಿಒ/ಬಿಪಿಒ, ಟೆಲಿಕಾಂ, ಯೋಜನಾ ನಿರ್ವಹಣೆ, ಬಿಸಿನೆಸ್ ಅನಾಲಿಸ್ಟ್ ಸೇರಿದಂತೆ ಇನ್ನೂ ಅನೇಕ ವಿಭಾಗಗಳಲ್ಲಿ ಆಕ್ಸೆಂಚರ್ ಹೊಸಬರನ್ನು ನೇಮಿಸಲಿದೆ.
ಆರಂಭಿಕ ಹಂತದಲ್ಲಿ 6,000 ರಿಂದ 7,000 ಜನ ಕ್ಯಾಂಪಸ್ ಸಂದರ್ಶನ ಮೂಲಕ ಕಂಪನಿ ಸೇರಲಿದ್ದಾರೆ. ಒಟ್ಟಾರೆ 10,000 ದಿಂದ 13,000 ಉದ್ಯೋಗಿಗಳು ಆಕ್ಸೆಂಚರ್ ಸೇರುವ ಅವಕಾಶ ಸಿಗಲಿದೆ.
ಭಾರತದಲ್ಲಿ 35,000 ಉದ್ಯೋಗಿಗಳು, ಅಮೆರಿಕದಲ್ಲಿ 40,000 ಉದ್ಯೋಗಿಗಳು ಹಾಗೂ ಫಿಲಿಫೈನ್ಸ್ ನಲ್ಲಿ 35,000 ಉದ್ಯೋಗಿಗಳನ್ನು ಸಂಸ್ಥೆ ಹೊಂದಿದೆ,ಆಗಸ್ಟ್ ತಿಂಗಳ ಕೊನೆಗೆ ಉದ್ಯೋಗಿಗಳ ಸಂಖ್ಯೆಯನ್ನು 80,000ಕ್ಕೆ ಹೆಚ್ಚಿಸಿಕೊಳ್ಳುವ ಇರಾದೆ ಆಕ್ಸೆಂಚರ್ ಗಿದೆ.
ಒಟ್ಟಾರೆ ವಿಕಿಪೀಡಿಯ ಮಾಹಿತಿ ಪ್ರಕಾರ ಜಾಗತಿಕವಾಗಿ ಟಿಸಿಎಸ್ ಉದ್ಯೋಗಿಗಳ ಸಂಖ್ಯೆ 243,545 ಸಂಖ್ಯೆಯನ್ನು ಆಕ್ಸೆಂಚರ್ ಮೀರಿಸಿದ್ದು 251,000 ದಾಟುತ್ತದೆ. ಭಾರತದಲ್ಲಿ ಆಕ್ಸೆಂಚರ್ ಸಂಸ್ಥೆ ಉತ್ತಮ ನಿರ್ವಹಣೆ ಹೊಂದಿದ್ದು, ಕಳೆದ ತ್ರೈಮಾಸಿಕದಲ್ಲಿ ಹೊರಗುತ್ತಿಗೆ ವಿಭಾಗದ ಆದಾಯ 3.19 ಬಿಲಿಯನ್ ಡಾಲರ್ ಗಳಿಸಿದೆ(ಒಟ್ಟಾರೆ ಆದಾಯ 7.15 ಬಿಲಿಯನ್ ಡಾಲರ್) ಶೇ ಆದಾಯ 16ರಷ್ಟು ದಾಖಲೆ ಪ್ರಮಾಣದ ಏರಿಕೆ ಕಂಡಿರುವುದರಿಂದ ಭಾರತದಲ್ಲಿ ಹೆಚ್ಚಿನ ನೇಮಕಾತಿಗೆ ಸಂಸ್ಥೆ ಮುಂದಾಗಿದೆ.
ನಂದನ್ ನಿಲೇಕಣಿ ನೇತೃತ್ವದ Unique Identification Authority of India (UIDAI) ಯೋಜನೆ ಕೈ ಜೋಡಿಸಿರುವ ಆಕ್ಸೆಂಚರ್ ಸಂಸ್ಥೆ ಬಯೋಮೆಟ್ರಿಕ್ ಗುರುತು ಪತ್ತೆ ವ್ಯವಸ್ಥೆ ತಂತ್ರಜ್ಞಾನ ಒದಗಿಸಿದೆ. ಇದಲ್ಲದೆ ಭಾರತೀಯ ಅಂಚೆ ಇಲಾಖೆ ಗಣಕೀಕರಣ, ತಾಂತ್ರಿಕ ಸುಧಾರಣೆಯಲ್ಲೂ ಆಕ್ಸೆಂಚರ್ ತೊಡಗಿಕೊಂಡಿದೆ.
'ನಮ್ಮ ಸಂಸ್ಥೆ ಬೆಂಗಳೂರಿನಲ್ಲಿ ಭದ್ರವಾಗಿ ತಳವೂರಿದೆ. ಚೆನ್ನೈ ಹಾಗೂ ಹೈದರಾಬಾದ್ ಘಟಕ ಕೂಡಾ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಶೈಕ್ಷಣಿಕ ಅನುಕೂಲಕರ ವಾತಾವರಣ ಹೊಂದಿರುವ ಪುಣೆಯಲ್ಲಿ ಮುಂದಿನ ವಿಸ್ತರಣೆ ನಡೆಯಲಿದೆ. ಈ ವರ್ಷ ಕ್ಯಾಂಪಸ್ ಸಂದರ್ಶನ ಹೆಚ್ಚಾಗಲಿದೆ' ಎಂದು ಆಕ್ಸೆಂಚರ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಸಕ ಅವಿನಾಶ್ ವಶಿಷ್ಠ ಹೇಳಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications