ಗೂಗಲ್ ಬಿಟ್ಟ ಗರ್ಭಿಣಿ ಮರಿಸ್ಸಾ ಈಗ ಯಾಹೂ ಸಿಇಒ

13 ವರ್ಷಗಳ ಕಾಲ ಗೂಗಲ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಮರಿಸ್ಸಾ ಗರ್ಭಿಣಿ ಎಂಬುದು ಗುಟ್ಟಾಗಿ ಉಳಿದಿಲ್ಲ. ಸ್ವತಃ ಮರಿಸ್ಸಾ ಅವರೇ ಫಾರ್ಚ್ಯೂನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಕ್ಟೋಬರ್ 7ಕ್ಕೆ ಗಂಡು ಶಿಶು ಜನನದ ನಿರೀಕ್ಷೆಯಿದೆ ಎಂದು ಮರಿಸ್ಸಾ ಸಂತಸದಿಂದ ಹೇಳಿಕೊಂಡಿದ್ದಾರೆ.
ಗರ್ಭಿಣಿ ಸಿಇಒ ಆಗಿ ಆಯ್ಕೆ: ಆದರೆ, ತನ್ನ ಗರ್ಭಾವಸ್ಥೆ ಬಗ್ಗೆ ಜನವರಿಯಲ್ಲೇ ತಿಳಿದಿದ್ದ ಮರಿಸ್ಸಾ ಯಾಹೂ ಸಂಸ್ಥೆ ಆಕೆಯನ್ನು ತನ್ನ ಸಂಸ್ಥೆಯ ಉನ್ನತ ಸ್ಥಾನಕ್ಕಾಗಿ ಆಯ್ಕೆ ಮಾಡಿ ಸಂಪರ್ಕಿಸಿದಾಗ(ಜೂ.18) ಮರಿಸ್ಸಾ ವಿಷಯ ಮುಚ್ಚಿಟ್ಟು ಜೂನ್ ತಿಂಗಳ ನಂತರ ಗರ್ಭಾವಸ್ಥೆಯ ಬಗ್ಗೆ ತಿಳಿಯಲಿದೆ ಎಂದಿದ್ದರು.
ಆದರೆ, ಯಾಹೂ ಬೋರ್ಡ್ ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಜೂನ್ ಅಥವಾ ಜನವರಿ ಅಕೆ ವೈಯಕ್ತಿಕ ವಿಷಯವನ್ನು ಆಡಳಿತ್ಮಾಕ ಕಾರ್ಯಕ್ಷಮತೆ ಜೊತೆ ತಗುಲಿಹಾಕುವುದು ಸರಿಯಿಲ್ಲ. ವೃತ್ತಿ ಪರರಿಗೆ ಮಾದರಿಯಾಗಿರುವ ಮರಿಸ್ಸಾ, ಸಂಸಾರ ಹಾಗೂ ಸಂಸ್ಥೆ ಎರಡಲ್ಲೂ ನಿಭಾಯಿಸಬಲ್ಲರು ಎಂದು ಯಾಹೂ ಸಮರ್ಥಿಸಿಕೊಂಡಿದೆ.
ಸೆಪ್ಟೆಂಬರ್ ನಲ್ಲಿ ಯಾಹೂ ಬೋರ್ಡ್ ಮೀಟಿಂಗ್ ಗೆ ಮರಿಸ್ಸಾ ಗೈರು ಹಾಜರಾಗಬಹುದು ಆದರೆ, ತಾಯ್ತನದ ರಜೆ ಹೆಚ್ಚಿನ ವಾರಗಳು ದಾಟುವುದಿಲ್ಲ ಎಂದು ನಂಬಿದ್ದೇವೆ ಎಂದು ಯಾಹೂ ಸಂಸ್ಥೆ ಹೇಳಿಕೊಂಡಿದೆ.
ಗೂಗಲ್ ನ ಹೆಮ್ಮೆಯ ಉದ್ಯೋಗಿ: ಗೂಗಲ್ ಮ್ಯಾಪ್, ಗೂಗಲ್ ಅರ್ಥ್, ಜಗಾತ್, ಸ್ಟ್ರೀಟ್ ವ್ಯೂ ಹಾಗೂ ಸ್ಥಳೀಯ ಸರ್ಚ್ ಇಂಜಿನ್ ಮೊಬೈಲ್ ಸರ್ಚ್ ಮುಂತಾದ ಜನಪ್ರಿಯಾ ಉತ್ಪನ್ನಗಳ ಹಿಂದಿನ ಶಕ್ತಿಯಾಗಿ ಮರಿಸ್ಸಾ ಗುರುತಿಸಿಕೊಂಡಿದ್ದಾರೆ.
1999 ರಲ್ಲಿ ಗೂಗಲ್ ನ 20ನೇ ಉದ್ಯೋಗಿಯಾಗಿ ಸೇರಿಕೊಂಡಿದ್ದ ಮರಿಸ್ಸಾ, ಸಂಸ್ಥೆ ಜೊತೆಗೆ ವೈಯಕ್ತಿಕವಾಗಿ ಕೂಡಾ ಅತ್ಯುತ್ತಮ ಸಾಧನೆ ಮೆರೆದರು. ಐಗೂಗಲ್, ಗೂಗಲ್ ಟೂಲ್ ಬಾರ್, ಗೂಗಲ್ ನ್ಯೂಸ್ ಅಲ್ಲದೆ ಜೀಮೇಲ್ ಸೇರಿದಂತೆ 100ಕ್ಕೂ ಅಧಿಕ ಗೂಗಲ್ ಉತ್ಪನ್ನಗಳ ಕಾರ್ಯ ನಿರ್ವಹಣೆ ಹಿಂದೆ ಮರಿಸ್ಸಾ ಜಾಣ್ಮೆ, ಪರಿಶ್ರಮ ಅಡಗಿದೆ.
ಯಾಹೂ ಮಾಜಿ ಸಿಇಒ ಸ್ಕಾಟ್ ಥಾಮ್ಸನ್ ಅವರು ನಕಲಿ resume ಪ್ರಕರಣದಲ್ಲಿ ಸಿಕ್ಕಿ ಬಿದ್ದು ವಜಾಗೊಂಡ ಮೇಲೆ ಲಿವಿನ್ಸೊಹ್ನ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿತ್ತು. 700 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಬೃಹತ್ ಸಂಸ್ಥೆಯ ಚುಕ್ಕಾಣಿ ಹಿಡಿಯಲು ತುಂಬಾ ಸಂತಸವಾಗುತ್ತಿದೆ ಎಂದು ಮೇಯರ್ ಹೇಳಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications