ಡಚ್ಚರಿಗೆ ಅನಿರೀಕ್ಷಿತ ಸೋಲು, ಡೆನ್ಮಾರ್ಕ್ ಗೆ ಜಯ

ಮೊದಲ 20 ನಿಮಿಷದಲ್ಲಿ ಡೆನ್ಮಾರ್ಕ್ ತಂಡಕ್ಕೆ ಚೆಂಡು ಸಿಗದಂತೆ ಕಾದಾಡಿದ ಡಚ್ಚರು, 24ನೇ ನಿಮಿಷದಲ್ಲಿ ಡೆಹ್ಲಿ ಹೊಡೆದ ಕಿಕ್ ಡಚ್ಚರ ಗೋಲ್ ಕೀಪರ್ ಕಾಲಿನ ನಡುವೆ ತೂರಿ ಕೊಂಡು ಹೋಗಿ ಗೋಲ್ ಪೋಸ್ಟ್ ಒಳ ಸೇರಿತು. ನಂತರ ಮೊದಲಾರ್ಧ ಪೂರ್ತಿ ಡೆನ್ಮಾರ್ಕ್ ತಂಡದ ದಾಳಿಗೆ ಸಿಲುಕಿದ ಡಚ್ಚರು ಮಂಕಾಗಿಬಿಟ್ಟರು.
ನಂತರ ಡ್ಯಾನಿಷ್ ತಂಡದ ದಾಳಿಗೆ ಸಿಲುಕಿದ ಡಚ್ಚರು ದಾಳಿ ಮರೆತು ರಕ್ಷಣೆಗೆ ನಿಲ್ಲಬೇಕಾಯಿತು. ರಾಬೆನ್, ವಾನ್ ಪರ್ಸಿ, ಸ್ನೈಡರ್, ನಾಯಕ ಬೊಮ್ಮೆಲ್ ನಂಥ ಉತ್ತಮ ಸ್ಟೈಕರ್, ಹೈಟಿಂಗನಂಥ ಅನುಭವಿ ಇದ್ದರೂ ಡಚ್ಚರು ಸಂಘಟಿತ ಹೋರಾಟ ನೀಡುವಲ್ಲಿ ವಿಫಲರಾದರು.
ಅಫೆಲಾಯ್, ವಾನ್ ಡರ್ ವಾರ್ಟ್, ಹಾಂಟೆಲಾರ್, ಕ್ಯುಟ್ ಬದಲಿ ಆಟಗಾರರಾಗಿ ಮೈದಾನಕ್ಕೆ ಇಳಿಯುವಷ್ಟರಲ್ಲಿ ನೆದರ್ಲೆಂಡ್ ಕೈಯಿಂದ ಪಂದ್ಯ ಜಾರಿತ್ತು. ಸುಮಾರು 11 ಕಾರ್ನರ್ ಕಿಕ್, ಪೆನಾಲ್ಟಿ ಅಂಗಳದ ಬಳಿ ಫ್ರೀ ಕಿಕ್ ಪಡೆದರೂ ಡಚ್ಚರು ಗೋಲು ಗಳಿಸುವಲ್ಲಿ ವಿಫಲರಾದರು.
| ನೆದರ್ಲೆಂಡ್ | 0 - 1 | ಡೆನ್ಮಾರ್ಕ್ |
| 20 (8) | ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) | 8(0) |
| 53% | ಚೆಂಡಿನ ಹಿಡಿತ | 47% |
| 11 | ಕಾರ್ನರ್ಸ್ | 4 |
| 8 | ಫೌಲ್ಸ್ | 12 |
| 1 | ಆಫ್ ಸೈಡ್ | 2 |
| 0 | ಹಳದಿ ಕಾರ್ಡ್ | 2 |
| 0 | ಕೆಂಪು ಕಾರ್ಡ್ | 0 |
ಎರಡನೇ ಅವಧಿಯಲ್ಲಿ ಕೊಂಚ ಒರಟಾಟಕ್ಕೆ ಇಳಿದ ಡ್ಯಾನಿಷ್ ಆಟಗಾರರು 2 ಹಳದಿ ಕಾರ್ಡ್ ಸಹ ಪಡೆದರು. ಆದರೆ, ಕ್ರೊಹನ್ ಡೆಹ್ಲಿ ಅಲ್ಲದೆ ಎರಿಕ್ ಸನ್, ನಾಯಕ ಆಗ್ಗರ್, ರಾಮ್ಮೆಡೆಲ್ ಉತ್ತಮ ಆಟ ಪ್ರದರ್ಶಿಸಿದರು. 70ನೇ ನಿಮಿಷದಲ್ಲಿ ಮತ್ತೊಮ್ಮೆ ಡೆಹ್ಲಿ ಗೋಲು ಬಾರಿಸುವ ಯತ್ನದಲ್ಲಿ ವಿಫಲರಾದರು.
ಆದರೆ, ಬಿ ಗುಂಪಿನ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಡೆನ್ಮಾರ್ಕ್ ತಂಡ ಉತ್ತಮ ಆರಂಭ ಪಡೆದಿದೆ. ನೆದರ್ಲೆಂಡ್ ಗೆ ಮುಂದಿನ ಹಂತದ ಹಾದಿ ತುಂಬಾ ಕಠಿಣವಾಗಿದೆ. ಜರ್ಮನಿ, ಪೋರ್ಚುಗಲ್ ನಂಥ ಬಲಿಷ್ಠ ತಂಡಗಳ ಸವಾಲನ್ನು ಡಚ್ಚರು ಎದುರಿಸಬೇಕಿದೆ.
ವಿಶ್ವಕಪ್ 2010ರಲ್ಲಿ ಡಚ್ಚರ ಕೈಲಿ ಸೋಲು ಅನುಭವಿಸಿದ್ದ ಡೆನ್ಮಾರ್ಕ್ ತಂಡ 1967ರ ನಂತರ ಮೊದಲ ಗೆಲುವು ಸಾಧಿಸಿದ ದಾಖಲೆ ಮೆರೆಯಿತು. ಡೆನ್ಮಾರ್ಕ್ ಹಾಗೂ ನೆದರ್ಲೆಂಡ್ ತಂಡಗಳೆರಡು 4-2-3-1 ರಣಂತ್ರದೊಂದಿಗೆ ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ಆದರೆ, ಡೆನ್ಮಾರ್ಕ್ ನ ರಣತಂತ್ರ ಜಯ ತಂದು ಕೊಟ್ಟಿತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications