ಡಿಜಿಪಿ: ಶಂಕರ ಬಿದರಿ ಹೋರಾಟಕ್ಕೆ ಭಾರಿ ಸೋಲು

ಗಮನಾರ್ಹವೆಂದರೆ ಇನ್ಫ್ಯಾಂಟ್ ಸೇವಾವಧಿ ಇನ್ನು ಮೂರು ದಿನಕ್ಕೆ ಮುಕ್ತಾವಾಗಲಿದೆ. ಆದ್ದರಿಂದ ಸೇವಾ ಹಿರಿತನ ಹೊಂದಿರುವ ಐಪಿಎಸ್ (ಕರ್ನಾಟಕ ಕೇಡರ್) ಅಧಿಕಾರಿ, ಮಿಜೋರಾಮ್ ರಾಜ್ಯದ ಲಾಲ್ ರೋಕುಮಾ ಪಚಾವ್ ಅವರು ಡಿಜಿಪಿಯಾಗಿ ನೇಮಕವಾಗುವ ಸಾಧ್ಯತೆ ಹೆಚ್ಚಾಗಿದೆ.
ಹೈಕೋರ್ಟ್ ವಿಭಾಗೀಯ ಪೀಠದ ಮಹತ್ವದ ತೀರ್ಪು: ಭಾರಿ ಕಾನೂನು ಹೋರಾಟ ನಡೆಸಿದ್ದ ಶಂಕರ ಬಿದರಿ ಆ ಸ್ಥಾನಕ್ಕೆ ಅರ್ಹರಲ್ಲ ಎಂದು ಹೈಕೋರ್ಟ್ ಸೋಮವಾರ ಪುನರುಚ್ಚರಿಸಿದೆ. ಇದರಿಂದ ಇನ್ನು 3 ದಿನಗಳ ಸೇವಾವಧಿ ಬಾಕಿ ಹೊಂದಿರುವ ಬಿದರಿ ಅವರು ಡಿಜಿ-ಐಜಿಪಿ ಹುದ್ದೆಗೇರುವ ಕನಸು ಕೈಕೊಟ್ಟಿದೆ. ಪೊಲೀಸ್ ಗೃಹನಿರ್ಮಾಣ ನಿಗಮದ ಡಿ.ಜಿ.ಯಾಗಿ ಅವರು ತಮ್ಮ ಐಪಿಎಸ್ ಆಳ್ವಿಕೆಯನ್ನು ಮುಗಿಸಲಿದ್ದಾರೆ.
'ಕಳಂಕಿತ' ಬಿದರಿಯನ್ನು ಡಿಜಿಪಿಯನ್ನಾಗಿ ನೇಮಕ ಮಾಡಿದ್ದ ಕೇಂದ್ರ ಲೋಕಸೇವಾ ಆಯೋಗದ (UPSC) ಆದೇಶವು ದೋಷಪೂರಿತ ಎಂದು ನ್ಯಾಯಮೂರ್ತಿಗಳಾದ ಎನ್ ಕುಮಾರ್ ಹಾಗೂ ಎಚ್ಎಸ್ ಕೆಂಪಣ್ಣ ಅವರ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಇದೇ ವೇಳೆ ಬಿದರಿ ಅವರೇ ಡಿಜಿ-ಐಜಿಪಿಯಾಗಿ ಮುಂದುವರಿಯಲು ಅನುವು ಮಾಡಿಕೊಡಬೇಕೆಂದು ಪ್ರತ್ಯೇಕ ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರಕ್ಕೂ ತೀವ್ರ ಮುಖಭಂಗವಾಗಿದೆ.
ನರಹಂತಕ ವೀರಪ್ಪನ್ ಕಾರ್ಯಾಚರಣೆ ವೇಳೆ ವಿಶೇಷ ಕಾರ್ಯಪಡೆಯ ಕಮಾಂಡಂಟ್ ಆಗಿದ್ದ ತಮ್ಮ ವಿರುದ್ಧ ವೈಯಕ್ತಿಕವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ನ್ಯಾ. ಸದಾಶಿವ ಆಯೋಗ ಯಾವುದೇ ವರದಿ ನೀಡಿಲ್ಲ.
ಆದರೂ ತಮ್ಮ ವಿರುದ್ಧವಾಗಿಯೇ ಹೈಕೋರ್ಟ್ ಈ ಹಿಂದೆ ಆದೇಶ ಹೊರಡಿಸಿದೆ ಎನ್ನುವುದು ಸುಪ್ರೀಂಕೋರ್ಟ್ನಲ್ಲಿ ಬಿದರಿ ಅವರ ಮುಖ್ಯ ವಾದವಾಗಿತ್ತು. ಆದುದರಿಂದ ವರದಿಯನ್ನು ಪರಿಶೀಲಿಸಿ ಪುನಃ ಆದೇಶ ಹೊರಡಿಸಬೇಕು ಎಂದು ಸುಪ್ರೀಂಕೋರ್ಟ್ ಸಹ ಹೈಕೋರ್ಟ್ಗೆ ನಿರ್ದೇಶಿಸಿತ್ತು.
ಬಿದರಿ ನೇತೃತ್ವದ ಕಾರ್ಯಪಡೆ ಎಸಗಿರುವ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಕುರಿತು ಈ ಎರಡೂ ಆಯೋಗಗಳು ಯಾವ ಯಾವ ಪ್ಯಾರಾಗಳಲ್ಲಿ ಏನೇನು ವರದಿ ನೀಡಿವೆ ಎಂಬ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳು, ಸೋಮವಾರ ಹೊರಡಿಸಿದ 144 ಪುಟಗಳ ತೀರ್ಪಿನಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ.
ಆದರೆ ಈ ವರದಿಯನ್ನು ಕೇಂದ್ರ ಲೋಕಸೇವಾ ಆಯೋಗದ ಮುಂದೆ ಸರ್ಕಾರ ಇಟ್ಟಿಲ್ಲ. ಒಂದು ವೇಳೆ ವರದಿಯನ್ನು UPSC ಗಮನಕ್ಕೆ ತಂದಿದ್ದರೆ ಬಿದರಿ ಹೆಸರನ್ನು ಅದು ಡಿಜಿ-ಐಜಿಪಿ ಹುದ್ದೆಗೆ ಶಿಫಾರಸು ಮಾಡುತ್ತಿರಲಿಲ್ಲ ಎಂದೂ ಪೀಠ ವ್ಯಾಖ್ಯಾನಿಸಿದೆ.
-
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications