ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರೇಮಠ್ ಜೆಡಿಎಸ್ ಏಜೆಂಟ್: ಡಿಕೆ ಶಿವಕುಮಾರ್

By Mahesh
|
Google Oneindia Kannada News

Dk Shivakumar
ಬೆಂಗಳೂರು, ಮೇ.25: ನಮ್ಮ ಮುಂದಿನ ಟಾರ್ಗೆರ್ಟ್ ಡಿಕೆ ಶಿವಕುಮಾರ್ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್ ಆರ್ ಹಿರೇಮಠ ಅವರು ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್, ಅವರು ನನ್ನ ವಿರುದ್ಧ ಸಿಬಿಐ ಅಷ್ಟೇ ಅಲ್ಲ, ಇಂಟರ್ ಪೋಲ್ ಕರೆಸಿ ತನಿಖೆ ನಡೆಸಲಿ ನಾನು ಸಿದ್ಧ ಎಂದಿದ್ದಾರೆ.

ಎಸ್ ಆರ್ ಹಿರೇಮಠ್ ಅವರು ಜೆಡಿಎಸ್ ನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಲು ಆರ್ ಟಿಐ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ.

ಆದರೆ, ಈ ಎಲ್ಲಾ ಮಾಹಿತಿಗಳು ಎಚ್ ಡಿ ಕುಮಾರಸ್ವಾಮಿ ಬಳಿ ಈ ಮೊದಲೇ ಇತ್ತು ಎಂಬುದನ್ನು ಮರೆಯುವಂತಿಲ್ಲ. ಅಕ್ರಮ ಗಣಿಗಾರಿಕೆ ಆರೋಪ ರಾಜಕೀಯ ಪ್ರೇರಿತ, ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಡಿರುವ ಷಡ್ಯಂತ್ರ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹಿರೇಮಠ್ ಅವರು ಮಾಡಿರುವ ಆರೋಪವನ್ನು ನ್ಯಾಯಾಲಯದ ಮುಂದಿಡಲಿದೆ. ನಾನು ಕಾನೂನು ಸಮರಕ್ಕೆ ಸಿದ್ಧ. ಗಣಿ ಲೂಟಿ ಮಾಡಿದ ಎಚ್ ಡಿ ಕುಮಾರಸ್ವಾಮಿ ಅವರು ಹಿರೇಮಠ್ ಕಣ್ಣಿಗೆ ಯಾಕೋ ಬಿದ್ದಿಲ್ಲ. ನಮ್ಮ ಕುಟುಂಬ ನಡೆಸಿಕೊಂಡು ಬಂದಿರುವ ವ್ಯಾಪಾರ, ವ್ಯವಹಾರದ ಮೇಲೆ ಇವರಿಗೆ ಕಣ್ಣು ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

English summary
"Advocate SR Hiremath is just a JDS agent, I'm not afraid of any kind of investigation. Let Interpol probe the case if CBI is not sufficient. I m not doing any kind of illegal mining business" said Senior Congress leader DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X