ರಾಜೀನಾಮೆ ನಿರ್ಧಾರ ಮುಂದೂಡಿದ ಯಡಿಯೂರಪ್ಪ
ಬೆಂಗಳೂರು,
ಮೇ.14: ನಿರೀಕ್ಷೆಯಂತೆ ಬೆಂಗಳೂರಿನಲ್ಲಿ ಸಂಜೆ ಮಳೆ ಸುರಿದ ಕಾರಣ, ಯಡಿಯೂರಪ್ಪ ಅವರು ಹಚ್ಚಿದ ಪಠಾಕಿ ಟುಸ್ ಆಗಿದೆ. ಕ್ಲೈಮ್ಯಾಕ್ಸ್ ತನಕ ಹಲವು ತಿರುವು ಗಳನ್ನು ಪಡೆದುಕೊಂಡ ರಾಜಕೀಯ ವಿದ್ಯಮಾನಗಳು ಕೊನೆಗೆ Anti Climax ನಲ್ಲಿ ಅಂತ್ಯಗೊಂಡಿದೆ. ಒಂದೇ ಸಾಲಿನಲ್ಲಿ ಹೇಳುವುದಾದರೆ..ಯಡಿಯೂರಪ್ಪ ಬಿಜೆಪಿ
ಪಕ್ಷ
ತೊರೆಯುತ್ತಿಲ್ಲ.
ಆದರೆ,
ರಾಜೀನಾಮೆ
ನೀಡುವುದನ್ನು
ಮುಂದೂಡಿದ್ದಾರೆ.
id="toptextpromo">
ರೇಸ್
ಕೋರ್ಸ್ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯುದಕ್ಕೂ ಸದಾನಂದ, ಈಶ್ವರಪ್ಪ ಹಾಗೂ ಅನಂತ್ ಕುಮಾರ್ ಅವರನ್ನು ಯಡಿಯೂರಪ್ಪ ಅವರು ಟಾರ್ಗೆಟ್ ಮಾಡಿದರು. ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು
ಇಲ್ಲಿದೆ:
id='are-slot-1'
class='oiad
oi-axt
oiadv'>
id='top-searched-articles'>
*
ಸಿಎಂ ಆದಾಗಿನಿಂದ ಶಾಸಕಾಂಗ ಸಭೆ ಕರೆದಿಲ್ಲ. ಬಿಜೆಪಿಯನ್ನು 40ವರ್ಷಗಳ ಕಾಲ ಕಟ್ಟಿ ಬೆಳೆಸಿದ್ದೇನೆ* ಶಾಸಕಾಂಗ ಸಭೆ ಕರೆಯಲು ಮನವಿ ಸಲ್ಲಿಸಿದ ತುಮಕೂರಿನ ಶಾಸಕರಿಗೆ ಸದಾನಂದರಿಂದ ಬೆದರಿಕೆ.
* ನಾನೇನು ಸನ್ಯಾಸಿಯಲ್ಲ..ಆದರೆ ಜಾತಿ ರಾಜಕಾರಣಿಯಾಗಿಲ್ಲ.
* ಸಿಎಂ ಡಿವಿಎಸ್. ಜೆಡಿಎಸ್ ಜೊತೆ ಕೈಜೋಡಿಸಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ.
* ಅನಂತ್ ಕುಮಾರ್ ಅವರು ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಮೂರು ಬಾರಿ ಯತ್ನಿಸಿದರು.
* ಸತತ 16 ವರ್ಷ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಅನಂತ್ ಕುಮಾರ್.
* ನನ್ನ ನಿರ್ಧಾರ ಬದಲಿಸಲು ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಪಕ್ಷದ ಹಿರಿಯರು, ಮಠಾಧೀಶರ ಸಲಹೆ ಕಾರಣ.
* ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ 70 ಶಾಸಕರು ನನ್ನ ಜೊತೆ ಇದ್ದರು. ಈಗಲೂ ಇದ್ದಾರೆ.
* ನನ್ನ ಬೆಂಬಲಿಗರ ಕ್ಷೇತ್ರಗಳಿಗೆ ಈ ವರೆಗೂ ಚಿಕ್ಕಾಸು ಅನುದಾನ ನೀಡಿಲ್ಲ.
* ಅನಂತ್ ಕುಮಾರ್ ಅವರಿಗೆ ಸಿಎಂ ಕುರ್ಚಿ ಮೇಲೆ ಕಣ್ಣು. ಕರ್ನಾಟಕದ ಅಭಿವೃದ್ಧಿ ಅವರಿಗೆ ಬೇಕಿಲ್ಲ.












Click it and Unblock the Notifications