ಕ್ರೈಸ್ತರಿಗೆ ಗೃಹ ಸಾಲದ ಮೇಲಿನ ಬಡ್ಡಿ ಮನ್ನಾ
ಮಂಗಳೂರು,
ಮೇ 11: ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತ ಸಮುದಾಯದವರು ಸರಕಾರಿ ಬ್ಯಾಂಕುಗಳಿಂದ ಪಡೆದಿರುವ ಗೃಹ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ರಾಜ್ಯ ಸರಕಾರದ ಕ್ರೈಸ್ತ ಸಮುದಾಯದವರ ಅಭಿವೃದ್ಧಿ ಯೋಜನೆಯಡಿ ಗರಿಷ್ಠ ಒಂದು ಲಕ್ಷ ರುಪಾಯಿವರೆಗೆ ಈ ಸವಲತ್ತು ಕಲ್ಪಿಸಲಾಗಿದೆ. id="toptextpromo">ಈ
ಯೋಜನೆಯಡಿ 2007ರ ನಂತರದ ಬಡ್ಡಿಯನ್ನು ನೇರವಾಗಿ ಆಯಾ ಬ್ಯಾಂಕುಗಳಿಗೆ Karnataka Minorities Development Corporation (KMDC) ಸಂಸ್ಥೆ ನೇರವಾಗಿ ಪಾವತಿಸಲಿದೆ. ಫಲಾನುಭವಿಗಳು ಇದನ್ನು ಮರುಪಾವತಿಸುವ ಅಗತ್ಯವಿರುವುದಿಲ್ಲ ಎಂದು KMDC ಅಧ್ಯಕ್ಷ ಎನ್ ಬಿ ಅಬೂಬಕ್ಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಾರ್ಷಿಕ
1.5 ಲಕ್ಷ ರುಪಾಯಿಗಿಂತ ಕಡಿಮೆ ಆದಾಯವಿರುವ ಕ್ರೈಸ್ತ ಕುಟುಂಬಗಳು ಈ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ 164 ಫಲಾನುಭವಿಗಳನ್ನು ಗುರುತಿಸಲಾಗಿತ್ತು, 1.23 ಕೋಟಿ ರುಪಾಯಿ ಬಡ್ಡಿ ಮನ್ನಾ ಆಗಲಿದೆ. ಕನಿಷ್ಠ 1 ಲಕ್ಷ ಮತ್ತು ಗರಿಷ್ಠ 5 ಲಕ್ಷ ರುಪಾಯಿ ಗೃಹ ಸಾಲ ಪಡೆದವರಿಗೆ ಇದು ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,771 ಮಂದಿ ಕ್ರೈಸ್ತರಿಗೆ ಆರ್ಥಿಕವಾಗಿ ನೆರವಾಗಲು ನಾನಾ ಯೋಜನೆಗಳಡಿ 10.71 ಕೋಟಿ ರು. ನಿಧಿಯಿದೆ.











Click it and Unblock the Notifications