ರೌಡಿ ಟೂರಿಸ್ಟುಗಳಿಂದ ದಾಂಡೇಲಿ ಅರಣ್ಯ ಅಧಿಕಾರಿ ಹತ್ಯೆ

ದಾಂಡೇಲಿಯ ಕಾಳಿ ನದಿ ತಟದಲ್ಲಿ ಮೊಸಳಗೆ ಆಹಾರ ಹಾಕುವ ನೆಪದಲ್ಲಿ ಪ್ರಾಣಿ ಹಿಂಸೆ ಮಾಡುತ್ತಿದ್ದ ಆರೋಪಿ ತಂಡಕ್ಕೆ ಜವಾಬ್ದಾರಿಯುತ ಅಧಿಕಾರಿಯಾಗಿ Assistant conservator of forests (ACF) ಮದನ್ ಬುದ್ದಿವಾದ ಹೇಳಿದ್ದೇ ಬಂತು ಮದವೇರಿದ ದುಷ್ಕರ್ಮಿಗಳು ಅವರನ್ನು ಹಿಗ್ಗಾಮುಗ್ಗ ಥಳಿಸಿತ್ತು. ನಂತರ ಪ್ರಕರಣವನ್ನು ಮುಚ್ಚಿಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ದಾಂಡೇಲಿ ನಗರಸಭೆ ನೌಕರ ಅರವಿಂದ್ ಚವಾಣ್ ನದಿ ದಡದಲ್ಲಿದ್ದ ರೆಸಾರ್ಟಿನಲ್ಲಿ ತನ್ನ ತಂಡದೊಂದಿಗೆ ಮೋಜುಮಸ್ತಿಯಲ್ಲಿದ್ದ. ತಂಡದಲ್ಲಿ ಬಾಗಲಕೋಟೆಯ ಸಬ್ಇನ್ಸ್ಪೆಕ್ಟರ್ ಎಸ್ಆರ್ ನಾಯ್ಕ್, ಒಬ್ಬ ಸಹಾಯಕ ಸಬ್ಇನ್ಸ್ಪೆಕ್ಟರ್, ಭಗವತಿ ಹೈಸ್ಕೂಲಿನ ಶಿಕ್ಷಕಿ ಶೈಲಜಾ ನಾಯ್ಕ್ ಮತ್ತು ಕೆಇಬಿ ಇಂಜಿನಿಯರ್ ಆನಂದ್ ನಾಯ್ಕ್ ಇದ್ದರು ಎನ್ನಲಾಗಿದೆ.
ಇತ್ತ ಮದನ್ ನಾಯ್ಕ್ ದಾಂಡೇಲಿ ದಡದಲ್ಲಿರುವ ದಾಂಡೇಲಪ್ಪ ದೇವಸ್ಥಾನಕ್ಕೆ ಸಂಸಾರ ಸಮೇತ ಬಂದಿದ್ದರು. ಅದೇ ವೇಳೆ, ಅರವಿಂದ್ ಚವಾಣ್ ಮತ್ತು ಅವನ ತಂಡ ಕುಡಿದ ಮಸ್ತಿಯಲ್ಲಿ ಮೂಳೆ ಮಾಂಸಗಳನ್ನು ಮೊಸಳೆಗಳಿಗೆ ಹಾಕುತ್ತಾ, ಅದನ್ನು ಹಿಂಸಿಸುತ್ತಿದ್ದರು. ಮದನ್ ನಾಯ್ಕ್ ಇದಕ್ಕೆ ಆಕ್ಷೇಪಿಸಿದರು.
ಕುಪಿತಗೊಂಡ ತಂಡ ಅವರ ಮೇಲೆ ಏಕಾಏಕಿ ಮುಗಿಬಿದ್ದು, ಥಳಿಸಿದೆ. ನಾಯ್ಕ್ ಅವರ ಪತ್ನಿ ಸುಮತಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಮದನ್ ನಾಯ್ಕ್ ಸಹಾಯಕ್ಕೆ ಧಾವಿಸಿದರು. ಆಗ ಪುಂಡರು ಅವರ ಮೇಲೂ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಸಂಬಂಧ ದಾಂಡೇಲಿ ಗ್ರಾಮಾಂತರ ಠಾಣೆ ಪೊಲೀಸರು ಆನಂದ ರೂಪ್ ಸಿಂಗ್ ನಾಯ್ಕ್, ಸುರೇಶ್ ಸಂಕರಪ್ಪ ನಾಯ್ಕ್, ಪ್ರಶಾಂತ್ ರಾಮ ಲಮಾಣಿ ಮತ್ತು ಅರವಿಂದ ಚವಾಣ್ ಅವರನ್ನು ಬಂಧಿಸಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಬಾಗಲಕೋಟೆಯ ಸಬ್ಇನ್ಸ್ಪೆಕ್ಟರ್ ಎಸ್ಆರ್ ನಾಯ್ಕ್ ನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ರೆಸಾರ್ಟಿನಲ್ಲಿದ್ದ ಗುಡಿಸಲುಗಳಿಗೆ ಬೆಂಕಿಹಚ್ಚಿ ಪ್ರತಿಭಟಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications