ಹೈದರಾಬಾದಿನಲ್ಲಿ ನೆಲಕಚ್ಚಿದೆ ಐಟಿ ಉದ್ಯಮ

ಸಮಸ್ಯೆಗಳ ಆಗರವಾಗಿರುವ ಹೈದರಾಬಾದಿನತ್ತ ಉದ್ದಿಮೆದಾರರು ತಲೆಹಾಕುತ್ತಿಲ್ಲ. 2011ರ ಅಂತ್ಯಕ್ಕೆ ಸುಮಾರು 12 ಲಕ್ಷ ಕೋಟಿ ರು. ಬಂಡವಾಳ ಹರಿದುಬಂದಿದೆ. ಬಂಡವಾಳ ಹರಿವು ಪ್ರಮಾಣದಲ್ಲಿ ಐಟಿ ಕ್ಷೇತ್ರ (ಶೇ. 19ರಷ್ಟು ಪಾಲಿನೊಂದಿಗೆ) ತೃತೀಯ ಸ್ಥಾನದಲ್ಲಿದೆ.
ಹೀಗ್ಯಾಕೆ... 'ಮೊದಲನೆಯದಾಗಿ ರಾಜಕೀಯ ಅಸ್ಥಿರತೆ ಬಹಳಷ್ಟು ಕಾಡುತ್ತಿದೆ. ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿಯಲ್ಲಿ ಅಷ್ಟೊಂದು ವಿಶ್ವಾಸವಿಲ್ಲ' ಎನ್ನುತ್ತಾರೆ ಐಟಿ ಮಂದಿ. ಚಂದ್ರಬಾಬು ನಾಯ್ಡು ಕಾಲದಲ್ಲಿ ರಾಜ್ಯದಲ್ಲಿ ಐಟಿ ಉದ್ಯಮ ನಿಜಕ್ಕೂ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ಆ ನಂತರ ವೈ ಎಸ್ ರಾಜಶೇಖರ ರೆಡ್ಡಿ ಅದನ್ನು ಮುಂದುವರಿಸಿಕೊಂಡು ಹೋಗಿದ್ದರು. ಆದರೆ ಇತ್ತೀಚೆಗೆ ರಾಜ್ಯಕ್ಕೆ ದೂರದೃಷ್ಟಿಯ ಸಾರಥಿಯಿಲ್ಲದೆ ಸೊರಗುತ್ತಿದೆ ಎಂಬ ಮಾತುಗಳು ಎಲ್ಲೆಲ್ಲೂ ಕೇಳಿಬರುತ್ತಿವೆ.
ಸದ್ಯಕ್ಕೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳೂ ಕಾಣುತ್ತಿಲ್ಲ. ಆಡಳಿತಶಾಹಿಯೂ ಉದ್ಯಮರಂಗದತ್ತ ಆಸಕ್ತಿವಹಿಸುತ್ತಿಲ್ಲ. ಒಟ್ಟಾರೆಯಾಗಿ ಐಟಿ ಉದ್ಯಮ ಪೇಲವವಾಗುತ್ತಿದೆ ಎಂದು Associated Chambers of Commerce and Industry (Assocham) ಅಧ್ಯಯನ ಹೇಳಿದೆ.












Click it and Unblock the Notifications