ಒಬಾಮಾ ಭಾರತ-ವಿರೋಧಿ: ಮತ್ತೊಮ್ಮೆ ಜಾಹೀರು

ಬರಾಕ್ ಒಬಾಮಾ ಮುಂದಿನ ನವೆಂಬರಿನಲ್ಲಿ ಅಮೆರಿಕದ ಅಧ್ಯಕ್ಷರಾಗಿ ಪುನರಾಯ್ಕೆಯಾಗಲು ಹಾತೊರೆಯುತ್ತಿದ್ದಾರೆ. ಚುನಾವಣೆ ಪ್ರಚಾರಕ್ಕಾಗಿ ಬಿಲಿಯನ್ ಗಟ್ಟಲೆ ಹಣ ಸುರಿಯುತ್ತಿದ್ದಾರೆ. ಅದರಲ್ಲಿ ಭಾರತ-ವಿರೋಧಿ ವಿಚಾರಗಳಿಗೆ ಒತ್ತುಕೊಟ್ಟಿರುವ ಒಬಾಮಾ, ಪ್ರತಿ ಸ್ಪರ್ಧಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಏನಾಗಿದೆಯೆಂದರೆ ... ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ರಿಪಬ್ಲಿಕನ್ ಪಕ್ಷದ ಮಿಟ್ ರೋಮ್ನಿ ಈ ಹಿಂದೆ ಮೆಸಾಚ್ಯುಸೆಟ್ಸಿನ ಗವರ್ನರ್ ಆಗಿದ್ದಾಗ ಭಾರತಕ್ಕೆ ಭರಪೂರವಾಗಿ ಐಟಿ ಕ್ಷೇತ್ರದಲ್ಲಿ ಹೊರಗುತ್ತಿಗೆ ನೀಡಿದ್ದರು ಎಂದು ಹಾಲಿ ಅಧ್ಯಕ್ಷ ಒಬಾಮಾ ಆರೋಪಿಸಿದ್ದಾರೆ.
'corporate CEO ಆಗಿ ಮಿಟ್ ರೋಮ್ನಿ ಅಮೆರಿಕದ ಉದ್ಯೋಗಾವಕಾಶಗಳನ್ನು ಭಾರತಕ್ಕೆ ಧಾರೆಯೆರೆದಿದ್ದರು. outsource ಮಾಡುವ ಕಂಪನಿಗಳಿಗೆ ತೆರಿಗೆ ರಿಯಾಯಿತಿಗಳನ್ನು ಒದಗಿಸಬೇಕು ಎಂದು ಮಿಟ್ ರೋಮ್ನಿ ಈಗಲೂ ಬಯಸುತ್ತಿದ್ದಾರೆ. ಅರ್ಥಾತ್ ಭಾರತದ ಪರ ಅವರು ಒಲವು ಹೊಂದಿದ್ದಾರೆ' ಎಂಬ ಸಂಗತಿಯನ್ನು ಒಬಾಮಾ ಪರ ಪ್ರಚಾರ ಜಾಹೀರಾತುಗಳಲ್ಲಿ ತುಂಬಲಾಗಿದೆ.
ಹೀಗೆ ಭಾರತ ವಿರೋಧಿ ನೀತಿಯನ್ನು ಅನುಮೋದಿಸಿರುವ ಒಬಾಮಾ, ಅದಕ್ಕಾಗಿ ಅಂದರೆ ಈ ಜಾಹೀರಾತುಗಳಿಗಾಗಿ 780,000 ಡಾಲರ್ ವೆಚ್ಚ ಮಾಡಿದ್ದಾರೆ. ಪ್ರಮುಖ ರಾಜ್ಯಗಳಾದ ವರ್ಜೀನಿಯಾ, ಒಹಿಯೊ ಮತ್ತು ಐಓವಾದಲ್ಲಿ ಈ ಜಾಹೀರಾತು ಹೆಚ್ಚಾಗಿ ಕಾಣಿಸಿಕೊಂಡಿದೆ.
ಅಧಿಕಾರ ಲಾಲಸೆಯಲ್ಲಿರುವ ಒಬಾಮಾ ಅವರು ರೋಮ್ನಿ-ವಿರೋಧಿ ಪ್ರಚಾರದಲ್ಲಿ ತೊಡಗಿದ್ದು, ಆತ ಸ್ವಿಸ್ ಬ್ಯಾಂಕ್ ಖಾತೆ ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಅಂತಹವನಿಂದ ಅಮೆರಿಕದ ಜನತೆ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ? ಎಂದು ಕಿಚ್ಚುಹಚ್ಚಿದ್ದಾರೆ.
ಅಮೆರಿಕದ ಕಂಪನಿಗಳು ವೆಚ್ಚ ತಗ್ಗಿಸಲು back office jobಗಳನ್ನು ಭಾರತಕ್ಕೆ outsource ಮಾಡುತ್ತವೆ. ಭಾರತದ ಐಟಿ ಸಾಫ್ಟ್ ವೇರ್ ಮತ್ತು ಐಟಿ ಸೇವಾಧಾರಿತ ಸೇವೆಗಳನ್ನು ಅಮೆರಿಕಕ್ಕೆ ಧಾರೆಯೆರೆದು ಶೇ. 60 ರಷ್ಟು ಆದಾಯವನ್ನು ಅಮೆರಿಕ ಕಂಪನಿಗಳಿಂದ ಗಳಿಸುತ್ತವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications