Get Updates
Get notified of breaking news, exclusive insights, and must-see stories!

ಜಗನ್‌ ಸಾಕ್ಷಿಗೆ ಬಿಡಿಗಾಸು ಜಾಹೀರಾತೂ ನೀಡಬೇಡಿ

andhra-govt-to-stop-ads-to-jagan-sakshi-media
ಹೈದರಾಬಾದ್, ಏ.30: ಆಂಧ್ರ ಸರಕಾರವು ವೈ.ಎಸ್. ಜಗನ್‌ಮೋಹನ ರೆಡ್ಡಿ ಅಕ್ರಮ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ತವಕದಲ್ಲಿರುವುದರ ಜತೆಜತೆಗೆ ಜಗನ್ ಆಸ್ತಿಗೆ ನೀರೆರೆಯುವಂತಹ ಸಂಪನ್ಮೂಲಗಳನ್ನು ಬಂದ್ ಮಾಡುವ ರಣೋತ್ಸಾಹವೂ ತೋರಿದೆ.

ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್‌ ಒಡೆತನದ ಜಗತಿ ಗ್ರೂಪ್ ಆಫ್ ಕಂಪನೀಸ್ ಗೆ ಸರಕಾರದ ವತಿಯಿಂದ ಒಂದು ನಯಾ ಪೈಸೆ ಜಾಹೀರಾತೂ ನೀಡಬಾರದು ಎಂದು ಫರ್ಮಾನು ಹೊರಡಿಸಿದೆ. ಇದು ನಿಜಕ್ಕೂ ಅಪರೂಪವೇ. ಆದರೆ ಇದಕ್ಕೆ ನಿರ್ದಿಷ್ಟ, ಸಕಾರಣ ಇದೆಯಾ ಅಂದರೆ ಜಗನ್ ಕಣ್ಣು ಶೂನ್ಯ ನೋಟದತ್ತ ಹೊರಳುತ್ತದೆ.

ಆದಾಗ್ಯೂ, ತೆಲುಗು ಭಾಷೆಯ ಸಾಕ್ಷಿ ದಿನಪತ್ರಿಕೆ ಮತ್ತು ಸಾಕ್ಷಿ ಚಾನೆಲ್ ಗೆ ಯಾವುದೇ ಜಾಹೀರಾತು ನೀಡದಂತೆ ಆಂಧ್ರದ ವಾರ್ತಾ ಇಲಾಖೆ ಪ್ರಸ್ತಾವನೆಯೊಂದನ್ನು ರಜಾ ದಿನವಾದ ಭಾನುವಾರ ಸರಕಾರಕ್ಕೆ ಕಳಿಸಿದೆ.

ಅಸಲಿಗೆ ಜಗತಿ ಗ್ರೂಪ್ ಆಫ್ ಕಂಪನೀಸ್ ಸ್ಥಾಪನೆಯಾಗಿರುವುದೇ ಅಕ್ರಮ ಹಣದಿಂದ. ಸಿಬಿಐ ಈಗಾಗಲೇ ಪ್ರಕರಣದ ಸಂಬಂಧ ಸಲ್ಲಿಸಿರುವ ಆರೋಪಪಟ್ಟಿಯಲ್ಲೂ ಇದನ್ನೇ ದಾಖಲಿಸಿದೆ. ಹಾಗಾಗಿ, ಅಕ್ರಮ ಕಂಪನಿಗೆ ಸರಕಾರದ ವತಿಯಿಂದ ಆರ್ಥಿಕ ನೆರವು ನೀಡುವುದು ಸರ್ವಥಾ ಸಾಧುವಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಸರಕಾರ ಅಧಿಸೂಚನೆ ಹೊರಡಿಸುವ ಲಕ್ಷಣಗಳು ದಟ್ಟವಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+