ಎಆರ್ ಇನ್ಫಾಂಟ್ ರಾಜ್ಯದ ನೂತನ ಡಿಜಿ ಐಜಿಪಿ

ಶಂಕರಿ ಬಿದರಿ ಅವರನ್ನ ಕರ್ನಾಟಕ ಹೌಸಿಂಗ್ ಬೋರ್ಡ್ ಎಂಡಿಯಾಗಿ ವರ್ಗಾವಣೆ ಮಾಡಲಾಗಿದೆ.
ಈ ಮಧ್ಯೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಶಂಕರ್ ಎಂ. ಬಿದರಿ ಹಾಗೂ ಗೃಹರಕ್ಷಕ ದಳದ ಡಿಜಿಪಿಯಾಗಿದ್ದ ಇನ್ಫಾಂಟ್ ಅವರ ಮಧ್ಯೆ ಕಾನೂನು ಸಮರ ಜಾರಿಯಲ್ಲಿದೆ.
ಶಂಕರ್ ಬಿದರಿ ನೇಮಕಾತಿಯನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ ರದ್ದುಪಡಿಸಿದೆ. ಬಿದರಿಯವರು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇರುವುದರಿಂದ, ಸೇವಾಹಿರಿತನದಲ್ಲಿ ಅವರಿಗಿಂತ ಹಿರಿಯರಾಗಿರುವ ಎಆರ್ ಇನ್ಫಾಂಟ್ ಅವರು ಕರ್ನಾಟಕ ಹೈಕೋರ್ಟಿನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.
ಶಂಕರ್ ಬಿದರಿ ಅವರ ಅಧಿಕಾರ ಅವಧಿ 2012ರ ಮೇ ತಿಂಗಳಿನವರೆಗೂ ಇತ್ತು. ಆದರೆ, ಅದಕ್ಕೆ ಮುನ್ನ, ನೇಮಕಾತಿ ರದ್ದುಗೊಳಿಸಲಾಗಿದೆ.












Click it and Unblock the Notifications