ಹಿರಿಯ ವೇದಿಕೆಯಿಂದ ದೂರವೇ ಉಳಿದ ಶಕುಂತಳಾ

ಬಿಜೆಪಿಯ ಹಿರಿಯರ ವೇದಿಕೆಯ ರಾಜಕೀಯ ಚಟುವಟಿಕೆ ಮತ್ತು ನಿಲುವಿಗೂ ಸ್ವಾಭಿಮಾನಿ ವೇದಿಕೆಗೂ ಯಾವುದೇ ಸಂಬಂಧ ಇಲ್ಲ. ಹಿರಿಯರ ವೇದಿಕೆಯಲ್ಲಿ ಇರುವವರು ಈಗಲೂ ಬಿಜೆಪಿಯಲ್ಲೇ ಇದ್ದಾರೆ. ನಾನೂ ಸೇರಿದಂತೆ ಸ್ವಾಭಿಮಾನಿ ವೇದಿಕೆಯಲ್ಲಿ ಇರುವ ಹಲವರು ಬಿಜೆಪಿಯಿಂದ ಹೊರ ಹಾಕಲ್ಪಟ್ಟವರು. ಆದ ಕಾರಣ ಬಿಜೆಪಿ ಹಿರಿಯರ ವೇದಿಕೆಗೂ ಸ್ವಾಭಿಮಾನಿ ವೇದಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಶಕುಂತಳಾ ವಿವರಣೆ ನೀಡಿದ್ದಾರೆ.
ಬಿಜೆಪಿ ಹಿರಿಯರ ವೇದಿಕೆಯ ಮುಂದಾಳುಗಳಾದ ಕೆ. ರಾಮಭಟ್, ಅಣ್ಣಾ ವಿನಯಚಂದ್ರ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ವಾಭಿಮಾನಿ ವೇದಿಕೆಯಲ್ಲಿ ಸಕ್ರಿಯರಾಗಿದ್ದವರು. ಬಿಜೆಪಿಯ ಆಂತರಿಕ ವಿಚಾರಗಳ ಕುರಿತು ಪ್ರಶ್ನಿಸಿ, ಚುನಾವಣೆಯಲ್ಲಿ ಸ್ವಾಭಿಮಾನಿ ವೇದಿಕೆಯನ್ನು ಕಣಕ್ಕಿಳಿಸಿದವರೂ ಹೌದು. ಆದರೆ ಅವರು ಈಗಲೂ ಬಿಜೆಪಿಯಲ್ಲಿದ್ದಾರೆ ಎಂದು ಶಕುಂತಳಾ ಹೇಳಿದರು.












Click it and Unblock the Notifications