ಯಡ್ಡಿಗೆ ಸಮ ಬತ್ತಿಯಿಟ್ಟ ಬಿಜೆಪಿ ಹಿರಿತಲೆಗಳು

ಸರಣಿ ಭೇಟಿಗಳು, ಸರ ಪಟಾಕಿಗಳು: ಕರ್ನಾಟಕ ಬಿಜೆಪಿ ಹಿರಿಯ ವೇದಿಕೆಯ ಗೌರವಾಧ್ಯಕ್ಷ ಬಿಬಿ ಶಿವಪ್ಪ ನೇತೃತ್ವದ ಹಿರಿಯರಿಗೆ ದೆಹಲಿಗೆ ಬರುವಂತೆ ಖುದ್ದು ಅಡ್ವಾಣಿಯವರೇ ಆಹ್ವಾನ ನೀಡಿದ್ದೇ ತಡ ಟೀಂ ಬಿಬಿ ದಡಗ್ಗನೆ ಎದ್ದು ದಿಲ್ಲಿಯತ್ತ ಧಾವಿಸಿದೆ. ನಿನ್ನೆಯಿಂದ (ಮಾರ್ಚ್ 27) ಬಿಬಿ ನೇತೃತ್ವದ ಟಿ. ಗೋವಿಂದಪ್ಪ, ಉರಿಮಜಲು ರಾಮಭಟ್, ನ್ಯಾಯವಾದಿ ದೊರೈರಾಜು, ಮಲ್ಲೇಶ್ ಹಾಗೂ ಅಣ್ಣಾ ವಿನಯಚಂದ್ರ ನಿಯೋಗವು ವರಿಷ್ಠರನ್ನು ಒಬ್ಬೊಬ್ಬರಾಗಿ ಭೇಟಿ ಮಾಡುತ್ತಿದ್ದಾರೆ.
ಇದು ಬಯಸದೆ ಬಂದ ಭಾಗ್ಯ ಎಂದು ಪರಿಗಣಿಸಿರುವ ಈ ಹಿರಿಯರು ಕಡ್ಡಿ ಮುರಿದಂತೆ ಯಡ್ಡಿಗೆ ಪತ್ತೆ ಪಟ್ಟಕಟ್ಟುವ ಅವಕಾಶವನ್ನು ಮುರಿದಿದ್ದಾರೆ. 'ಹಾಲಿ ಮುಖ್ಯಮಂತ್ರಿ ಸದಾನಂದಗೌಡರು ಇನ್ನೂ ಮೊನ್ನೆ ಮೊನ್ನೆ ಅಧಿಕಾರಕ್ಕೆ ಬಂದಿರುವುದು. ಅಷ್ಟಕ್ಕೂ ಅವರು ಉತ್ತಮ ಆಡಳಿತವನ್ನೇ ನೀಡುತ್ತಿದ್ದಾರೆ. ಅಂಥಾದ್ದರಲ್ಲಿ ಅವರ ಬದಲಾವಣೆ ಯಾಕೆ?' ಎಂದು ಪಕ್ಷದ ವರಿಷ್ಠರನ್ನು ಅಲವತ್ತುಕೊಂಡಿದ್ದಾರೆ.
ಇಷ್ಟು ದಿನ ಹೈಕಮಾಂಡ್ ತಮ್ಮನ್ನು ನಿರ್ಲಕ್ಷ್ಯಿಸಿದ್ದರೂ ಬೇಸರಿಸಿಕೊಳ್ಳದೆ ಈ ಹಿರಿಯರು 'ಇನ್ನಾದರೂ ಯಡಿಯೂರಪ್ಪಗೆ ಮಣೆ ಹಾಕಬೇಡಿ' ಎಂದೇ ಭಿನ್ನವಿಸಿಕೊಂಡಿದೆ. ರಾಮಭಟ್ಟರಂತೂ ತಮ್ಮ ಒಂದು ಕಾಲದ ಶಿಷ್ಯ ಸದಾನಂದರ ಪರ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡಿಗೂ ಇದೇ report/ feedback ಬೇಕಿತ್ತು ಅನಿಸುತ್ತದೆ. 'ಆಯ್ತು ನೀವು ಹೇಳುತ್ತಿರುವುದು ಸರಿಯಾಗಿಯೇ ಇದೆ. ಸದಾನಂದರನ್ನು ಸದ್ಯಕ್ಕೆ ಬದಲಾಯಿಸುವುದಿಲ್ಲ. ಆ ಯಡಿಯೂರಪ್ಪನನ್ನು ಹೇಗೆ ಸಂಭಾಳಿಸಬೇಕು ಎಂಬುದು ನಮಗೆ ಗೊತ್ತಿದೆ. ನೀವು ಅದರ ಚಿಂತೆ ಬಿಡಿ' ಎಂದು ಹಿರಿಯರಿಗೆ ಅಭಯ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಮಂಗಳವಾರ ರಾತ್ರಿ ತಿಳಿಸಿವೆ. (ಸದಾನಂದರಿಗೆ ವರವಾದ ಆ ಒಂದು ಭೇಟಿ...)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications