ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅನುಮಾನವೇ ಬೇಡ ನನ್ನಿಂದಲೇ ಬಜೆಟ್'

By Srinath
|
Google Oneindia Kannada News

i-will-present-budget-session-as-usual-dvs
ಉಡುಪಿ, ಮಾ.15: 'ಅನುಮಾನವೇ ಬೇಡ. ಬಜೆಟ್ ಅಧಿವೇಶನ ಸುಸೂತ್ರವಾಗಿ ಆರಂಭವಾಗುತ್ತದೆ. ನಾನೇ ಬಜೆಟ್ ಮಂಡಿಸುವೆ' ಎಂದು ಹಾಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಇಂದಿಲ್ಲಿ ಘಂಟಾಘೋಷವಾಗಿ ಹೇಳಿದರು.

ಮಾರ್ಚ್ 20ರಂದು ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತದೆ. ಮರುದಿನ 11 ಗಂಟೆಗೆ ನಾನೇ ಬಜೆಟ್ ಮಂಡಿಸುವೆ. ಅಧಿವೇಶನದ ಬಗ್ಗೆ ಅಧಿಸೂಚನೆ ಹೊರಬಿದ್ದಿದೆ. ಅನಗತ್ಯ ಗೊಂದಲ ಬೇಡ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಿಎಂ ಸದಾನಂದ ಗೌಡ ಸ್ಪಷ್ಟಪಡಿಸಿದರು.

'ಶಾಸಕರಿಗೆ ಅಧಿವೇಶನ ನಡಾವಳಿ ಪತ್ರ ತಲುಪಿಯೇ ಇಲ್ಲವಂತೆ. ಅಧಿವೇಶನ ನಡೆಯುವುದು ಅನುಮಾನವಾ?' ಎಂದು ಸುದ್ದಿಗಾರರು ಪ್ರಶ್ನಿಸಿದಾಗ 'ಪ್ರಕ್ರಿಯೆ ಆರಂಭವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಶ್ನಾವಳಿ ಇದ್ದಾಗ ಮಾತ್ರ ಒಂದು ವಾರಕ್ಕೆ ಮುಂಚೆ ನಡಾವಳಿ ಸೂಚನೆ ನೀಡಬೇಕಾಗುತ್ತದೆ. ಇಂಥದ್ದಕ್ಕೆಲ್ಲ ಸಾಮಾನ್ಯವಾಗಿ 3 ದಿನವಿದ್ದರೆ ಸಾಕು' ಎಂದು ಸದಾನಂದ ಮಾರುತ್ತರ ನೀಡಿದರು.

'ಅಧಿವೇಶನದ ಮೊದಲ ದಿನ ಸಂಪ್ರದಾಯದಂತೆ, ಮೊನ್ನೆ ನಿಧನರಾದ ವಿ ಎಸ್ ಆಚಾರ್ಯರಿಗೆ ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಬಳಿಕ ಅಧಿವೇಶನ ಸುಸೂತ್ರವಾಗಿ ನಡೆಯಲಿದೆ' ಎಂದೂ ಅವರು ಹೇಳಿದರು.

English summary
Karnataka CM Sadananda Gowda reiterated that he will present his maiden budget on Mar 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X