ಬಜೆಟ್ ನಿರೀಕ್ಷೆ: ಕನ್ನಡಿಗರಿಗೆ ಐದು ಹೊಸ ರೈಲು
ಹೊಸದಾಗಿ ಶ್ರವಣಬೆಳಗೊಳ-ಹಾಸನ-ಮೈಸೂರು ಪ್ಯಾಸೆಂಜರ್ ರೈಲು, ಮುಂಬೈ-ಮಂಗಳೂರು-ತಿರುನೆಲ್ವೇಲಿ, ಸೋಲ್ಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ ರೈಲುಗಳಿಗೆ ಹಸಿರು ನಿಶಾನೆ ದೊರಕುವ ನಿರೀಕ್ಷೆಯಿದೆ.
ಇವುಗಳೊಂದಿಗೆ ಸುಮಾರು 500 ಕಿ.ಮೀ. ಹೊಸ ರೈಲು ಮಾರ್ಗಗಳಿಗೆ ಈ ಬಜೆಟ್ ಅವಕಾಶ ನೀಡುವ ಸಾಧ್ಯತೆಯಿದೆ. ರೈಲ್ವೆ ಬಜೆಟಿನಲ್ಲಿ ಹೆಚ್ಚಿನ ಸವಲತ್ತು. ಸೌಲಭ್ಯ, ಯೋಜನೆಗಳು ದೊರಕುವ ನಿರೀಕ್ಷೆಯಿದೆ.
ಇದರೊಂದಿಗೆ ಶ್ರವಣಬೆಳಗೊಳ-ಬೆಂಗಳೂರು, ಹುಬ್ಬಳ್ಳಿ-ಅಂಕೋಲ, ಬೀದರ್-ಗುಲ್ಬರ್ಗ, ಹೊಸಪೇಟೆ-ಕೊಟ್ಟೂರು-ಹರಿಹರ, ಕುಡಿಚಿ-ಬಾಗಲಕೋಟೆ ನಡುವೆ ಹೊಸ ಮಾರ್ಗ ಸಮೀಕ್ಷೆ ಮಾಡಲು ಪ್ರಸಕ್ತ ಬಜೆಟ್ ಅವಕಾಶ ನೀಡುವ ನಿರೀಕ್ಷೆಯನ್ನು ವರದಿಗಳು ವ್ಯಕ್ತಪಡಿಸಿವೆ.
ಪ್ರಸಕ್ತ ರೈಲ್ವೆ ಬಜೆಟಿನಲ್ಲಿ ಬೆಂಗಳೂರು ಮತ್ತು ಮಂಗಳೂರು ರೈಲು ವಿಭಜನೆಯಾಗುವ ನಿರೀಕ್ಷೆಯಿದೆ. ಅಂದರೆ ನೈರುತ್ಯ ವಲಯವು ಯಶವಂತಪುರ-ಮಂಗಳೂರು-ಕಣ್ಣೂರು ರೈಲ್ವೆ ಬೋಗಿಗಳನ್ನು ವಿಭಜಿಸಿ, ಪ್ರತ್ಯೇಕ ಎಂಜಿನ್ ಜೋಡಿಸುವ ಸಾಧ್ಯತೆಯಿದೆ. ಇದರಿಂದ ಒಂದು ಬೋಗಿ ಕಣ್ಣೂರು ಕಡೆಗೂ ಮತ್ತೊಂದು ಬೋಗಿ ಕಾರವಾರ ಕಡೆಗೂ ಪ್ರಯಾಣ ಬೆಳೆಸಲಿದೆ.