ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪಗೆ ಸದ್ಯಕ್ಕೆ ಏನೂ ಇಲ್ಲ : ಗಡ್ಕರಿ
'ಬಜೆಟ್ ಅಧಿವೇಶನಕ್ಕೆ ಮುನ್ನ ಯಾವುದೇ ರೀತಿಯ ಬದಲಾವಣೆ ಮಾಡುವುದಿಲ್ಲ. ಸಿಎಂ ಸದಾನಂದ ಗೌಡರೇ ಬಜೆಟ್ ಮಂಡಿಸಲಿದ್ದಾರೆ' ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ. ಇದೇ ವಿಷಯವನ್ನು ಯಡಿಯೂರಪ್ಪ ಅವರ ಬೆಂಬಲಿಗರಿಗೂ ತಿಳಿಸುವಂತೆ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರಿಗೆ ಗಡ್ಕರಿ ಫೋನ್ ಕರೆ ಮಾಡಿ ಹೇಳಿದ್ದಾರೆ.
ಈ ನಡುವೆ ಗೋವಾ ಸಿಎಂ ಪದಗ್ರಹಣ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸದಾನಂದ ಗೌಡರು ತೆರಳಿದ್ದಾರೆ. ಅಲ್ಲಿ ನಿತಿನ್ ಗಡ್ಕರಿ ಅವರೊಂದಿಗೆ ಬಿಜೆಪಿ ಬಿಕ್ಕಟ್ಟು, ಬಜೆಟ್ ಮಂಡನೆ, ನಾಯಕತ್ವ ಬದಲಾವಣೆ ಜೊತೆಗೆ ರಾಜ್ಯ ಸಭೆ ನಾಲ್ಕು ಸ್ಥಾನಗಳ ವಿಚಾರವಾಗಿ ಚರ್ಚಿಸಿದ್ದಾರೆ.
ಯಡಿಯೂರಪ್ಪ ಅವರ ಕೇಸುಗಳು ಹಾಗೂ ಎಫ್ ಐಆರ್ ರದ್ದು ಬಗ್ಗೆ ಗಡ್ಕರಿಗೆ ವಿವರಗಳು ಲಭ್ಯವಾಗಿದೆ. ಜೊತೆಗೆ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವ ಬಿಎಸ್ ವೈ ಬೆಂಬಲಿಗರಿಗೆ ಕಡಿವಾಣ ಹಾಕಲು ಸದಾನಂದ ಗೌಡ ಹಾಗೂ ಈಶ್ವರಪ್ಪ ಅವರಿಗೆ ಗಡ್ಕರಿ ನಿರ್ದೇಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
Comments
ಯಡಿಯೂರಪ್ಪ ಸದಾನಂದ ಗೌಡ ನಿತಿನ್ ಗಡ್ಕರಿ ಗೋವಾ ಮುಖ್ಯಮಂತ್ರಿ ಬಿಜೆಪಿ nitin gadkari sadananda gowda yediyurappa bjp chief minister
English summary
CM Sadananda Gowda is attending Goa CM Manohar Parikkar oath taking ceremony. Sadananda will discuss with Party President Nitin Gadkari about the current political crisis in Karnataka. Meanwhile Gadkari clarified that Sadananda will present Karnataka Budget 2012-13.
Story first published: Friday, March 9, 2012, 17:04 [IST]