ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಸಿಎಂ ಪಟ್ಟ: ಸದಾನಂದ ವಾರ್ನಿಂಗ್

By Srinath
|
Google Oneindia Kannada News

karnataka-cm-sadanandagowda-warns-bsy-supporters
ಬೆಂಗಳೂರು,ಮಾ.8: ಯಡಿಯೂರಪ್ಪ ಸಿಎಂ ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಕಟ್ಟಾಳುಗಳು ತಲೆಗೊಂದರಂತೆ ಹೇಳಿಕೆ ನೀಡುತ್ತಿದ್ದಾರೆ. 'ಬಿಎಸ್ ವೈ ಅವರನ್ನು ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಿಸುವುದು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟ ವಿಷಯ' ಎಂದು ನಾನು ಹೇಳಿಕೆ ನೀಡಿರುವುದು ನಿಜ. ಆ ಹೇಳಿಕೆಗೆ ನಾನು ಈಗಲೂ ಬದ್ಧ. ಆದರೆ ಇದರ ವಿರುದ್ಧ ಶಾಸಕರು, ಮಂತ್ರಿಗಳು ಮಾತನಾಡುತ್ತಿರುವುದು ಸರ್ವತಾ ಸಾಧುವಲ್ಲ. ಎಚ್ಚರಾ, ಎಚ್ಚರ... ಎಂದು ಸದಾನಂದ ಗೌಡರು ಕೆಂಗಣ್ಣು ಬೀರಿದ್ದಾರೆ.

'ನಾನೂ ಮಾತು ತಿರುಚುವವನಲ್ಲ. ಚೆನ್ನಾಗಿ ಯೋಚನೆ ಮಾಡಿಯೇ ಮಾತನಾಡುವುದು. ನನ್ನಲ್ಲಿ ಹೇಳಲು ಏನೂ ಇಲ್ಲ ಅಂದಾಗ no comments ಅಂತ ನಿಮ್ಮ ಮುಂದೆ ಹೇಳುತ್ತೇನೆ. ಸುಮ್ಮನೇ ಅನಗತ್ಯದ ಆತಂಕ, ಗೊಂದಲ ಸೃಷ್ಟಿಸುವುದು ಬೇಡ' ಎಂದು ಸುದ್ದಿಗಾರರಿಗೆ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಯಾರೂ ಪಕ್ಷದ ನಾಯಕತ್ವದ ಬಗ್ಗೆ ಮಾತನಾಡುವಂತಿಲ್ಲ. ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಯಾರೂ ಅದನ್ನು ಉಲ್ಲಂಘಿಸುವಂತಿಲ್ಲ. ಇದನ್ನು ಮೊನ್ನೆ ಗೆಸ್ಟ್ ಲೈನ್ ರೆಸಾರ್ಟಿನಲ್ಲಿ ಪಕ್ಷದ ಅಧ್ಯಕ್ಷ ಗಡ್ಕರಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಆ ಮಾತಿಗೆ ಎಲ್ಲರೂ ಬದ್ಧವಾಗಿರಬೇಕು ಎಂದು ಸದಾನಂದರು ಫರ್ಮಾನು ಹೊರಡಿಸಿದರು.

English summary
As the BS Yeddyurappa supporters are on war path about reinstating BSY as Karnataka CM, Present CM Sadananada Gowda warns them to abide by Party High command about the leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X