ಕಾಮುಕ ಶಿಕ್ಷಕ ಫಾಲಾಕ್ಷಪ್ಪನಿಗೆ ಬಿತ್ತು ಕಪಾಳಮೋಕ್ಷ

ನಿವೃತ್ತಿಯ ಹಂತ ತಲುಪಿರುವ, ಬೋಳು ತಲೆಯ, 55 ವರ್ಷ ಈ ಶಿಕ್ಷಕನೇ ಫಾಲಾಕ್ಷಪ್ಪ. ಕಳೆದ ಒಂದು ವರ್ಷದಿಂದ ಸರಕಾರಿ ಶಾಲೆಯ ಮಕ್ಕಳಿಗೆ ಗಣಿತ, ಸಮಾಜ ಮತ್ತು ವಿಜ್ಞಾನ ಪಾಠ ಮಾಡುತ್ತಿದ್ದಾನೆ. ಪಾಠ ಮಾಡುವ ಬದಲು ಅಸಭ್ಯವಾಗಿ ವರ್ತಿಸಿ ಈಗ ಹೊಡೆತ ತಿಂದು ಪೊಲೀಸರ ಅತಿಥಿಯಾಗಿದ್ದಾನೆ.
ಫಾಲಾಕ್ಷಪ್ಪ ಅಸಹ್ಯವಾಗಿ ವರ್ತಿಸಿದ್ದನ್ನು 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೇ ಪೋಷಕರಿಗೆ ತಿಳಿಸಿದ್ದಾಳೆ. ತನ್ನ ಕೋಣೆಗೆ ಕರೆಸಿಕೊಂಡ ಫಾಲಾಕ್ಷಪ್ಪ ವಿದ್ಯಾರ್ಥಿನಿಯ ಮೈಮೇಲೆ ಕೈಯಾಡಿಸಲು ಆರಂಭಿಸಿದ್ದಾನೆ. ಆಕೆ ಕೂಗಲು ಬಾಯಿ ತೆರೆದಾಗ ಬಾಯಿಮುಚ್ಚಿ ಬೆದರಿಕೆ ಹಾಕಿದ್ದಾನೆ. ಆಕೆ ಹೇಗೋ ಪಾರಾಗಿ ಪಾಲಕರಿಗೆ ಅಲ್ಲಿ ನಡೆದಿದ್ದನ್ನು ವಿವರಿಸಿದ್ದಾಳೆ.
ಕೂಡಲೆ ಶಾಲೆಗೆ ಧಾವಿಸಿದ ಪಾಲಕರು ಮತ್ತು ಸಾರ್ವಜನಿಕರು ಫಾಲಾಕ್ಷನಿಗೆ ವಿದ್ಯಾರ್ಥಿಗಳೆದುರೇ ಗೂಸಾ ಕೊಟ್ಟಿದ್ದಾರೆ. ಕೆಲ ವಿದ್ಯಾರ್ಥಿಗಳು ತಮ್ಮ ಅನುಭವದ ಬಗ್ಗೆ ಹೇಳಿದ್ದು, ಆತ ಟಾಯ್ಲೆಟ್ಗೂ ಬಂದು ಇಣುಕುತ್ತಿದ್ದ. ಹೇಳಲು ಶಿಕ್ಷಕನಾದರೂ ಪಾಠವನ್ನೇ ಸರಿಯಾಗಿ ಮಾಡುತ್ತಿರಲಿಲ್ಲ. ಮಾಡುತ್ತಿದ್ದುದೆಲ್ಲ ಬರೀ ಕಾಮ ಚೇಷ್ಟೆಗಳೇ.
ಕರ್ನಾಟಕದ ಈ ಶಿಕ್ಷಕರಿಗೆ ಇದೇನಾಗಿದೆ? ಕೆಲ ದಿನಗಳ ಹಿಂದೆ ಕೆ.ಆರ್. ಪುರದಲ್ಲಿ ಕೂಡ ದಲಿತ ವಿದ್ಯಾರ್ಥಿನಿಯನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳಲು ಹೋದ ಶಿಕ್ಷಕನನ್ನು ಸಾರ್ವಜನಿಕರೇ ಶಿಕ್ಷಿಸಿದ್ದರು. ಇನ್ನು ಟ್ರಿಯೋ ಅಂತಾರಾಷ್ಟ್ರೀಯ ಶಾಲೆಯ ಪ್ರಿನ್ಸಿಪಾಲ್ ಪಾಲ್ ಮೀಕಿನ್ ಮಾಡಬಾರದ್ದೆಲ್ಲ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಉನ್ನತ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ?
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications