ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈನಲ್ ಷೋಗೆ ಯಡಿಯೂರಪ್ಪ ಸರ್ವಸಿದ್ದತೆ

By Srinath
|
Google Oneindia Kannada News

bs-yeddyurappa-gets-ready-for-final-show
ಬೆಂಗಳೂರು,ಫೆ. 22: ಮಾಜಿ ಸಿಎಂ ಯಡಿಯೂರಪ್ಪ ಅವರೀಗ ತಮ್ಮ ಏಕಂಶ ಕಾರ್ಯಕ್ರಮವನ್ನು ಅಗತ್ಯಕ್ಕಿಂತ ಹೆಚ್ಚಿಗೆ ಸ್ಪಷ್ಟಗೊಳಿಸಿದ್ದಾರೆ. ನಿತಿನ್ ಗಡ್ಕರಿ ನೇತೃತ್ವದ ಹೈಕಮಾಂಡ್ ಎದುರು ಇದೇ ಅಂಶವನ್ನು ಮಂಡಿಸುವುದು ಬಹಿರಂಗವಾಗಿದೆ.

ದಾಖಲಾರ್ಹ ಸಂಗತಿಯೆಂದರೆ ಈ ಸ್ಥಿತ್ಯಂತರದಲ್ಲಿ ಕಾಶಿಯಿಂದ ಬಂದ ಯಡಿಯೂರಪ್ಪ ಬಲಿಷ್ಠರಾಗಿದ್ದಾರೆ. ಆದರೆ ಮುಖ್ಯಮಂತ್ರಿ ಸದಾನಂದ ಗೌಡ ಏಕಾಂಗಿಯಾಗಿದ್ದಾರೇನೋ ಅನಿಸುತ್ತಿದೆ. ಯಡಿಯೂರಪ್ಪ ಬೇಡ ಅನ್ನುವುದಕ್ಕಿಂತ ಹೆಚ್ಚಿಗೆ ಸದಾನಂದ ಮುಂದುವರಿಯಲಿ ಎನ್ನುವವರ ಸಂಖ್ಯೆ ಕ್ಷೀಣವಾಗಿದೆ.

ಅನಂತ ಕುಮಾರ್ ನಿರ್ದೇಶಿತ ಯಡಿಯೂರಪ್ಪ ವಿರೋಧಿ ಎಲ್ ಕೆ ಅಡ್ವಾಣಿ ಅವರು ಸದಾನಂದ ಗೌಡ ಮುಂದುವರಿಕೆಗೆ ಒತ್ತಾಸೆಯಾಗಿರಬಹುದಾದರೂ ಮುಖ್ಯವಾಗಿ ಅಡ್ವಾಣಿ ಬಣವನ್ನು ಹೊರತುಪಡಿಸಿ, ಗಡ್ಕರಿ ಹೈಕಮಾಂಡ್ ಯಡಿಯೂರಪ್ಪಗೇ ತಮ್ಮ ನಿಷ್ಠೆ ತೋರುವುದರಲ್ಲಿ ಅನುಮಾನವಿಲ್ಲ. ಇನ್ನು 25 ಶಾಸಕ ಕಟ್ಟಾಳುಗಳೊಂದಿಗೆ ರಂಗಕ್ಕಿಳಿದ ಯಡಿಯೂರಪ್ಪ ತಮ್ಮ ಬಲವನ್ನು ಕ್ಷಣಕ್ಷಣಕ್ಕೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಾನಾಗ್ಲಿಲ್ಲಾಂದ್ರೆ ಶೆಟ್ಟರ್ ಸಿಎಂ ಆಗಲಿ ಎಂದು ಪಲಕುತ್ತಲೇ ಯಡಿಯೂರಪ್ಪ ತಮ್ಮ ಅಸ್ತಿತ್ವವನ್ನು ದೃಢಪಡಿಸಿಕೊಳ್ಳುತ್ತಿದ್ದಾರೆ.

ಸದಾನಂದ ಗೌಡರ ಮುಖ್ಯಮಂತ್ರಿ ಖುರ್ಚಿ ಮೇಲಿನ ಹೈಕಮಾಂಡ್ ಹಿಡಿತ ಸ್ವಲ್ಪವೇ ಸಡಿಲವಾದರೂ ಧುತ್ತನೆ ತಮ್ಮನ್ನೇ ಪ್ರತಿಷ್ಠಾಪಿಸಿಕೊಳ್ಳುವುದು ಯಡಿಯೂರಪ್ಪ ಮನಸ್ಸಿನಲ್ಲಿ ಭದ್ರವಾಗಿ ಕುಳಿತಿದೆ. ಹಾಗಾಗುತ್ತದಾ ಎಂಬುದೇ ಸದ್ಯದ ಕುತೂಹಲ.

English summary
Karnataka BJP Crisis - the former chief minister B.S. Yeddyurappa is on all out slaughter on present Chief Minister D.V. Sadananada Gowda. BSY busy doing hectic parleys to put pressure on Party Prez Nitin Gadkari who will be in Bangalore on a two day visit 23-24 Feb 2012
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X