ಯಡಿಯೂರಪ್ಪ ಫ್ಯಾಮಿಲಿ ಮೇಲೆ ಬಿತ್ತು ಕ್ರಿಮಿನಲ್ ಕೇಸ್

ವಕೀಲ ವಿನೋದ್ ಎಂಬುವವರು ಯಡಿಯೂರಪ್ಪ ಅವರ ಪುತ್ರಿ ಅರುಣಾ ದೇವಿ ಅವರು ಪತ್ರಕರ್ತರ ಕೋಟಾದಡಿಯಲ್ಲಿ ಮಂಜೂರಾಗುವ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಯಡಿಯೂರಪ್ಪ, ಅರುಣಾದೇವಿ, ಗೃಹಮಂಡಳಿ ಆಯುಕ್ತ ದ್ಯಾಬೇರಿ ಸೇರಿದಂತೆ 8 ಜನರ ಮೇಲೆ ಆರೋಪ ಹೊರೆಸಿ ಶಿವಮೊಗ್ಗ ಜಿಲ್ಲಾ ಮತ್ತು ಲೋಕಾಯುಕ್ತ ನ್ಯಾಯಲಯಕ್ಕೆ ದೂರು ನೀಡಲಾಗಿದೆ.
ಯಡಿಯೂರಪ್ಪ ಅವರ ಕುಟುಂಬ ಶಿವಮೊಗ್ಗದಲ್ಲಿ ಅಕ್ರಮವಾಗಿ ನಾಲ್ಕು ನಿವೇಶನಗಳನ್ನು ಪಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಲೋಕಾಯುಕ್ತ ಸಂಸ್ಥೆಗೂ ಈ ಮುಂಚೆ ದೂರ ನೀಡಲಾಗಿತ್ತು. ಈಗ ವಿನೋದ್ ಅವರು ಮತ್ತೊಮ್ಮೆ ಶಿವಮೊಗ್ಗ ಲೋಕಾಯುಕ್ತ ಕೋರ್ಟ್ ನಲ್ಲಿ ಸಲ್ಲಿಸಿರುವ ದೂರು ಸ್ವೀಕಾರಗೊಂಡಿದೆ. ಮಾ.14ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.












Click it and Unblock the Notifications