ದೊಡ್ಡ ಗೌಡರಿಗೆ ಸಿದ್ದರಾಮಯ್ಯ ಖಡಕ್ ಸವಾಲು

ಜನತಾದಳವನ್ನು ಮತ್ತೆ ಅಧಿಕಾರಕ್ಕೆ ತರುವುದೇ ತಮ್ಮ ಗುರಿ ಎಂದು ದೇವೇಗೌಡ ಅವರು ಹೋದ ಕಡೆಯಲ್ಲೆಲ್ಲ ಕಣ್ಣೀರು ಸುರಿಸುತ್ತಾರೆ. ಆದರೆ, ವಾಸ್ತವವಾಗಿ ಅವರಿಗೆ ಬೇಕಿರುವುದು ತಮ್ಮ ಪುತ್ರನನ್ನು ಮುಖ್ಯಮಂತ್ರಿ ಮಾಡುವುದು. ರಾಜ್ಯದ ಅಧಿಕಾರ ತಮ್ಮ ಕುಟುಂಬದ ಅಧೀನದಲ್ಲೇ ಇರುವಂತೆ ನೋಡಿಕೊಳ್ಳುವುದು ಎಂದು ಸಿದ್ದು ಛೇಡಿಸಿದರು.
ಜೆಡಿಎಸ್ನಲ್ಲಿ ಪಿ.ಜಿ.ಆರ್. ಸಿಂಧ್ಯಾ, ಬಸವರಾಜ ಹೊರಟ್ಟಿ, ಎಂ.ಸಿ. ನಾಣಯ್ಯ ಮತ್ತಿತರ ಹಿರಿಯ ಮುಖಂಡರು ಇದ್ದಾರೆ. ಅವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಆದರೆ, ಹಾಗೆ ಎಂದಿಗೂ ಅವರು ಹೇಳುವುದಿಲ್ಲ. 30 ವರ್ಷ ಅವರೊಂದಿಗೆ ದುಡಿದಿದ್ದೇನೆ. ಪಕ್ಷ ಕಟ್ಟಿದ್ದೇನೆ. ನನ್ನಂಥವನಿಗೆ ಟೋಪಿ ಹಾಕಿದರು. ಶಾಮನೂರು ಹಾಗೂ ಅವರ ಪುತ್ರ ಮಲ್ಲಿಕಾರ್ಜುನ್ಗೆ ಈಗ ಟೋಪಿ ಹಾಕಲು ಹೊರಟಿದ್ದಾರೆ.
2 ಬಾರಿ ಮುಖ್ಯಮಂತ್ರಿಯಾಗುವ ಅವಕಾಶವಿತ್ತು: 'ನನಗೆ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಆದರೆ, ದೇವೇಗೌಡರು ಆ ಅವಕಾಶವನ್ನು ತಪ್ಪಿಸಿ ನನ್ನನ್ನು ಉಪ ಮುಖ್ಯಮಂತ್ರಿ ಮಾಡಿದರು. ಬಳಿಕ ನನ್ನನ್ನು ಪಕ್ಷದಿಂದಲೇ ಹೊರ ಹಾಕಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದರು. ನಮ್ಮ ಬೆಂಬಲ ಇಲ್ಲದೆ ಹೋಗಿದ್ದರೆ ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ, ಪಕ್ಷದಲ್ಲಿ 16 ಮಂದಿ ಸಂಸದರನ್ನು ಗೆಲ್ಲಿಸಿ ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದ್ದು ನಾವೇ. ಆದರೆ, ಈಗ ಅವರು ಅದನ್ನೆಲ್ಲ ಮರೆತು ಮಾತನಾಡುತ್ತಿದ್ದಾರೆ' ಎಂದು ಕಿಡಿಕಾರಿದರು.
ಅವರ ಆಮಿಷಕ್ಕೆ ಬಲಿಯಾಗಬೇಡಿ ಎಂದು ಎಚ್ಚರಿಸಿದರು. ಕುಮಾರಸ್ವಾಮಿ ಅವರು ಒಳ್ಳೆಯ ಮುಖ್ಯಮಂತ್ರಿ ಆಗಿದ್ದರೆ ಅವರ ಹೆಸರು ಲೋಕಾಯುಕ್ತದಲ್ಲಿ ಹೇಗೆ ಸೇರುತ್ತಿತ್ತು? ಅವರ ಪತ್ನಿ ಏಕೆ ಜಾಮೀನು ಪಡೆದರು? ಜಂತಕಲ್ ಮೈನಿಂಗ್ಸ್ನಲ್ಲಿ ಏನು ಮಾಡಿದ್ದಾರೆ ಎಲ್ಲ ಶೀಘ್ರ ಬಯಲಿಗೆ ಬರಲಿದೆ ಎಂದರು.












Click it and Unblock the Notifications