ಅನೈತಿಕ ಸಂಬಂಧದ ಸುಳಿಗೆ ಸಿಕ್ಕ ಎರಡು ನಾವೆಗಳು

ಬಂಧಿತವಾಗಿರುವ ಕುಮಾರ್ ಮತ್ತು ಆತನ ವಿರುದ್ಧ ದೂರು ನೀಡಿರುವ ಅಮಲಾ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿರುವ ಭೈರಸಂದ್ರದ ಮನೆಯ ಪಕ್ಕ ಕೆಲ ತಿಂಗಳ ಹಿಂದೆ ಈಗ ಬಂಧಿತಳಾಗಿರುವ ಸುಮಾ ಮತ್ತು ಅವಳ ಪತಿ ದಿನೇಶ್ ಬಂದು ನೆಲೆಸಲು ಶುರು ಮಾಡಿದರು. ಇಬ್ಬರ ಕುಟುಂಬದಲ್ಲಿಯೂ ಸಂಸಾರವೆಂಬ ದೋಣಿ ಸರಿಯಾಗಿ ತೇಲುತ್ತಿರಲಿಲ್ಲ.
ದಿನ ಕಳೆದಂತೆ ಕುಮಾರ್ ಪ್ರೀತಿಸುವ ಹೆಂಡತಿ ಇದ್ದರೂ ಸುಮಾಳ ಜೊತೆ ಕ್ರಮೇಣ ಸ್ನೇಹ, ಆತ್ಮೀಯತೆ, ಸಂಬಂಧ ಬೆಳೆಸಿಕೊಳ್ಳಲು ಶುರುಮಾಡಿದ್ದಾನೆ. ಅಷ್ಟರಲ್ಲಾಗಲೆ ಸುಮಾ ಕೂಡ ಗಂಡ ದಿನೇಶನನ್ನು ಮನೆಯಿಂದ ಓಡಿಸಿಬಿಟ್ಟಿದ್ದಳು. ವೈದ್ಯ ಹೇಳಿದ್ದು ಹಾಲು ಅನ್ನ ರೋಗಿ ಬಯಸಿದ್ದು ಹಾಲು ಅನ್ನ ಎಂಬಂತೆ ಸುಮಾ ಮತ್ತು ಕುಮಾರ್ ಅನೈತಿಕ ಚಟುವಟಿಕೆ ಶುರು ಮಾಡಿದ್ದಾರೆ.
ಇದರಿಂದ ರೋಸಿಹೋದ ಅಮಲಾ ಕೆಲ ದಿನಗಳ ಕಾಲ ಅಮ್ಮನ ಮನೆಗೆ ತೆರಳಿದ್ದಳು. ನಂತರ ರಾಜಿಯಾಗಿ ಗಂಡನ ಮನೆಗೆ ಮರಳಿ ಬಂದಿದ್ದಳು. ಆದರೂ, ಬಾಲ ನೆಟ್ಟಗೆ ಮಾಡಿಕೊಳ್ಳದ ಕುಮಾರ್ ಮತ್ತೆ ತನ್ನ ಹಳೆ ಚಾಳಿ ಶುರು ಹಚ್ಚಿಕೊಂಡಿದ್ದಾನೆ. ಗಂಡ ದಾರಿ ತಪ್ಪುತ್ತಿದ್ದುದನ್ನು ಮನಗಂಡ ಅಮಲಾ ಮಹಿಳಾ ಸಂಘಟನೆಗೆ ಇವರಿಬ್ಬರ ಅನೈತಿಕ ಸಂಬಂಧದ ಬಗ್ಗೆ ತಿಳಿಸಿದ್ದಾಳೆ.
ಮಹಿಳಾ ಸಂಘಟನೆಗಳು ಕೇಳಬೇಕೆ? ಕುಮಾರ್ ಮತ್ತು ಸುಮಾ ಇಬ್ಬರೂ ಒಟ್ಟಿಗಿದ್ದಾಗ ಮನೆಗೆ ನುಗ್ಗಿ ಇಬ್ಬರ ಕೂದಲು ಬಟ್ಟೆಗಳನ್ನು ಎಳೆದಾಡಿ, ಮನಸೋಇಚ್ಛೆ ಥಳಿಸಿದ್ದಾರೆ. ಇಷ್ಟಾಗಿಯೂ ಗಂಡ ಕುಮಾರ್ ಸುಮಾಳ ಜೊತೆಯೇ ಇರುವುದಾಗಿ ಹೇಳುತ್ತಿದ್ದಾನೆ. ಆದರೂ ಅಮಲಾ ಮಾತ್ರ ತನ್ನ ಗಂಡನ ಜೊತೆ ಇರುವುದಾಗಿ ಹೇಳುತ್ತಿದ್ದಾರೆ.
ಅಮಲಾ ಜೊತೆ ಬಾಳಲು ಇಷ್ಟವಿಲ್ಲದ ಕುಮಾರ್ ವಿಚ್ಛೇದನ ನೀಡದೆ ಪರಸ್ತ್ರೀಯೊಂದಿಗೆ ಬಾಳುವೆ ನಡೆಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕುಮಾರ್ ವಿರುದ್ಧ ಕೇಸು ಜಡಿಯಲಾಗಿದೆ. ಸುಮಾ ಕೂಡ ತನ್ನ ಗಂಡ ದಿನೇಶ್ನಿಗೆ ವಿಚ್ಛೇದನ ನೀಡದೆ ಪರಪುರುಷನೊಂದಿಗೆ ಚಕ್ಕಂದವಾಡಿದ್ದಕ್ಕಾಗಿ ಜೈಲು ಸೇರಿದ್ದಾಳೆ. ಇಬ್ಬರ ಸಂಸಾರಗಳು ಬಿರುಗಾಳಿಯ ಹೊಡೆತಕ್ಕೆ ಸಿಕ್ಕ ನಾವೆಗಳಂತಾಗಿವೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications