ಶೋಭಾ ಮೇಡಂಗೂ ಗೂಸಾ ಕೊಟ್ಟ ಸದಾನಂದ ಗೌಡ

ಶೋಭಾ ಮಾತಿಗೆ ಕೆರಳಿದರೂ ಎಂದಿನಂತೆ ತಮ್ಮ ಶಾಂತ ಸ್ವಭಾವದಲ್ಲೇ ಪ್ರತಿಕ್ರಿಯಿಸಿದ ಸದಾನಂದಗೌಡರು, 'ಬರೆದರೆ ಬರೆಯಲಿ ಬಿಡಿ. ನಾನೇನೂ ತಪ್ಪು ಮಾತನಾಡುತ್ತಿಲ್ಲ' ಎದು ಖಡಕ್ಕಾಗಿ ಹೇಳಿದ್ದಾರೆ. ಇದರಿಂದ ಶೋಭಾ ಮೇಡಂ ಸೇರಿದಂತೆ ಇಡೀ ಯಡ್ಡಿ ಪಟಾಲಂ ಕೈಕಟ್ ಬಾಯ್ಮುಚ್ ಆಗಿದೆ.
ಅಶೋಕ ಮಹಾರಾಜರಿಗೂ ಮಂಗಳಾರತಿ: ಇದಕ್ಕೂ ಮೊದಲು 'ಸಾರ್ ಆಗಿದ್ದಾಯ್ತು. ಎಲ್ಲವನ್ನು ಮರೆತುಬಿಡಿ. ನಿಮಗೆ ನೋವಾಗಿದ್ದರೆ ಸಾರಿ ಕೇಳುತ್ತೇವೆ' ಎಂದು ತುಂಬಿದ ಸಭೆಯಲ್ಲಿ ಅಶೋಕ ಮಹಾರಾಜರು ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಹೇಳಿದ್ದನ್ನು ಕೇಳಿಸಿಕೊಂಡ ಉನ್ನತ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ 'ಮುಂದೆಯೂ ಹೀಗೇ ಆದರೆ ಹೇಗೆ?' ಎಂಬ ಪ್ರಶ್ನೆಯನ್ನು ಮುಂದಿಟ್ಟು ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಸಂಗವೂ ನಡೆಯಿತು.












Click it and Unblock the Notifications