ವೇಶ್ಯಾವಾಟಿಕೆ ಆರೋಪಿಗಳಿಗೆ ಸಾವಿರ ರು. ದಂಡ ಸಾಕೆ?

ಆರೋಪಿಗಳಾದ ದಂಡೋತಿಯ ಚೆನ್ನಬಸಪ್ಪ ಹಾಗೂ ತೇಲ್ಕೂರಿನ ಲಕ್ಷ್ಮೀಬಾಯಿ 2007ರ ಡಿಸೆಂಬರ್ 5ರಂದು ಜನತಾ ಲಾಜ್ ಕೋಣೆ ಸಂಖ್ಯೆ 220ರಲ್ಲಿ ಬೆತ್ತಲಾಗಿ ರತಿಕ್ರೀಡೆಯಲ್ಲಿ ತೊಡಗಿದ್ದಾಗ ಸ್ಟೇಷನ್ ಬಜಾರ್ ಪೊಲೀಸ್ ಇನ್ಸ್ಪೆಕ್ಟರ್ ಅವರು ಪಂಚರ ಸಮಕ್ಷಮದಲ್ಲಿ ಪೊಲೀಸ್ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿದ್ದರು.
ಆರೋಪಿ ಲಕ್ಷ್ಮಿಬಾಯಿ ವೇಶ್ಯಾವಾಟಿಕೆಗಾಗಿ ಬಂದು ಸಿಕ್ಕಿಬಿದ್ದಿದ್ದು ಮಾನವ ಸಾಗಾಣಿಕೆ ತಡೆ ಕಾಯ್ದೆಯ ಕಲಂ 7, 8(ಎ),(ಬಿ) ಅನ್ವಯ ಅಪರಾಧ ಮಾಡಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುವುದಾಗಿ, ಈ ಆರೋಪಿಗಳ ವಿರುದ್ಧ ಪೊಲೀಸ್ ಇನ್ಸ್ಪೆಕ್ಟರ್ ಯು.ಬಿ. ಚಿಕ್ಕಮಠ ಅವರು ದೋಷಾರೋಪಣ ಪತ್ರ ಸಲ್ಲಿಸಿದ್ದರು.












Click it and Unblock the Notifications