ಕೈಗಾ ವಿರುದ್ಧದ ಕೂಗಿಗೆ ಸ್ವರ್ಣವಲ್ಲಿ ಶ್ರೀ ಬೆಂಬಲ

ಈ ಪ್ರತಿಭಟನೆಯಲ್ಲಿ ಸ್ವರ್ಣವಲ್ಲಿ ಮಠದ ಶ್ರೀ ಶಂಕರಾಚಾರ್ಯ ಗಂಗಾದರೇಂದ್ರ ಸರಸ್ವತಿ ಸ್ವಾಮೀಜಿ ಪಾಲ್ಗೊಂಡು ಗ್ರಾಮಸ್ಥರಿಗೆ ಬೆಂಬಲ ನೀಡಿದ್ದಾರೆ. ಇಲ್ಲಿನ ಜನರ ಆರೋಗ್ಯಕ್ಕೆ ಸ್ಥಾವರದಿಂದ ಅಪಾಯವುಂಟಾಗಿದ್ದು ಸರಕಾರವು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ವರ್ಣವಲ್ಲಿ ಸ್ವಾಮೀಜಿ ಆಗ್ರಹಿಸಿದ್ದಾರೆ.
ಏನಿದು ಪ್ರತಿಭಟನೆ: ಕೈಗಾ ಅಣುಸ್ಥಾವರದಿಂದ ಐದು ಕಿ.ಮೀ. ಆಸುಪಾಸಿನಲ್ಲಿರುವ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆಯಿದು. ಕೈಗಾ ಸ್ಥಾವರದ ಐದು ಕಿ.ಮೀ. ವ್ಯಾಪ್ತಿಯ ಹರ್ಟುಗಾ, ಬಳಸೆ, ಹರೂರು, ಕುಚೇಗಾರ ಮತ್ತು ಸುಳಗೇರಿ ಬಳಸೆ ಗ್ರಾಮಸ್ಥರು ಆತಂಕದಿಂದ ದಿನದೂಡುತ್ತಿದ್ದಾರೆ.
ಇಲ್ಲಿನ ಗ್ರಾಮಸ್ಥರಲ್ಲಿ ಕೆಲವರಿಗೆ ಕ್ಯಾನ್ಸರ್, ತುರಿಕೆ, ಅಂಗವ್ಯಕಲ್ಯ ಮುಂತಾದ ಹಲವು ರೋಗಗಳು ಆರಂಭವಾಗಿವೆ. ಇದಕ್ಕೆ ಕೈಗಾ ಅಣುಸ್ಥಾವರವೇ ಕಾರಣವೆಂದು ಹೇಳಲಾಗಿದೆ. ಇಲ್ಲಿನ ಕೃಷಿಗೂ ಹಾನಿಯಾಗಿದೆ. ಭತ್ತದ ಇಳುವರಿ ಕಡಿಮೆಯಾಗಿದೆ. ನೀರು ಕುಡಿಯಲು ಯೋಗ್ಯವಾಗಿಲ್ಲ.
2000ನೇ ವರ್ಷದಲ್ಲಿ ಆರಂಭವಾದ ಅಣುವಿದ್ಯುತ್ ಸ್ಥಾವರದ ನಾಲ್ಕು ಘಟಕಗಳಿಂದ ಇಲ್ಲಿನ ಪರಿಸರ, ಜನರ ಆರೋಗ್ಯಕ್ಕೆ ಹಾನಿಯಾಗಿದೆ. ಈಗ ಇಲ್ಲಿ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ಇನ್ನೆರಡು ಘಟಕಗಳನ್ನು ನಿರ್ಮಿಸುವ ಯೋಜನೆಯಿದೆ.












Click it and Unblock the Notifications