ಬಾಳೆಹಣ್ಣು ಗಂಟಲಲ್ಲಿ ಸಿಕ್ಕಿಕೊಂಡು ಎಲ್ ಕೆಜಿ ವಿದ್ಯಾರ್ಥಿ ಸಾವು

ವಾರದ ಆರಂಭದ ದಿನ ಸೋಮವಾರ ಸುಮಾರು 10.15ರಲ್ಲಿ ಎಂದಿನಂತೆ ಎಲ್ ಕೆಜಿ 'ಎಚ್' ಸೆಕ್ಷನ್ನಿನ 35 ವಿದ್ಯಾರ್ಥಿಗಳು ತಿಂಡಿ ಡಬ್ಬಿ ತೆರೆದು ಕೂತಾಗ ಈ ದುರ್ಘಟನೆ ನಡೆದಿದೆ. ಹುಡುಗ ಹರೀಶ್ ಸಾಯಿನಾಥನ್ ತನ್ನ ಬಾಕ್ಸಿನಲ್ಲಿದ್ದ ಬಾಳೆಹಣ್ಣನ್ನು ತೆಗೆದು ಒಂದು ಪೀಸನ್ನು ಬಾಯಿಗೆ ತುರುಕಿಕೊಂಡಿದ್ದಾನೆ. ಅದು ಒಂದೇ ಸಲ ಗಂಟಿಲಗೆ ಇಳಿದಿದೆ.
ಉಸಿರು ಬಿಗಿಹಿಡಿದು ನರಳಾಡುತ್ತಿದ್ದ ಮಗುವಿನ ರಕ್ಷಣೆಗೆ ಶಿಕ್ಷಕಿ ಮತ್ತು ಆಯಾ ತಕ್ಷಣ ಧಾಠವಿಸಿದ್ದಾರೆ. ಸಮೀಪದ ಆಸ್ಪತ್ರೆಗೂ ಸಾಗಿಸಿದ್ದಾರೆ. ಆದರೆ ಆ ವೇಳೆಗೆ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು.












Click it and Unblock the Notifications