ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕೆ ಸುಬ್ರಮಣ್ಯ: ದಲಿತರ ಮೇಲೆ ಹಲ್ಲೆಗೈದವರ ಬಂಧನ

By Mahesh
|
Google Oneindia Kannada News

Attackers on Dalits held
ಸುಳ್ಯ, ಡಿ.2: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಅಂಗವಾಗಿ ನಡೆದ ವಾರ್ಷಿಕ ಮಡೆಸ್ನಾನ ಅಥವಾ ಉರುಳುಸೇವೆ ಆಚರಣೆಗೆ ವಿರೋಧಿಸಿದ ದಲಿತ ಮುಖಂಡರ ಮೇಲೆ ಹಲ್ಲೆ ಮಾಡಿದವರನ್ನು ಕುಕ್ಕೆ ಸುಬ್ರಮಣ್ಯ ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಸೇರಿದಂತೆ ಐವರ ಮೇಲೆ ದೇವಸ್ಥಾನದ ಸಿಬ್ಬಂದಿ ಹಾಗೂ ಅನಾದಿ ಕಾಲದಿಂದಲೂ ಮಡೆಸ್ನಾನ ಮಾಡಿಕೊಂಡು ಬಂದಿರುವ ಮಲೆಕುಡಿಯರು ಬುಧವಾರ(ನ.30) ಹಲ್ಲೆ ನಡೆಸಿದ್ದರು.

ದಲಿತ ಮುಖಂಡರ ಹಲ್ಲೆ ಖಂಡಿಸಿ, ಮೈಸೂರು, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಗತಿಪರದಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.

ಈ ಬಾರಿ ಮಡೆಸ್ನಾನ ಅಥವಾ ಎಂಜೆಲೆಲೆ ಮೇಲೆ ಉರುಳುವ ಪದ್ಧತಿಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಆದರೆ, ಭಕ್ತಾದಿಗಳು, ಮಲೆಕುಡಿಯರ ಒತ್ತಾಯದ ಮೇರೆಗೆ ನಿಷೇಧವನ್ನು ಹಿಂಪಡೆಯ ಬೇಕಾಯಿತು ಎಂದು ದೇವಳದ ಆಡಳಿತಾಧಿಕಾರಿ ಸುಂದರಭಟ್‌ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಚ್‌ಎಂ ಕಾಳಿ ಅವರು ಹೇಳಿದ್ದರು.

ದೇವಳದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಜಿಲ್ಲಾಡಳಿತದಿಂದ ಮಾಹಿತಿ ಪಡೆದು ಹೆಚ್ಚಿನ ತನಿಖೆ ನಡೆಸುವುದಾಗಿ ಕುಕ್ಕೆ ಠಾಣೆ ಪೊಲೀಸರು ಹೇಳಿದ್ದಾರೆ.

English summary
Temple workers who attacked Dalit leader Shivaram and other five are arrested by Kukke Subramanya police. Urulu Seve (Made Snana) a religious ritual which has 400 years history. Dakshina Kannada District administration has taken back ban on Kukke Subrahmanya Temple's annual Madesnana Rituals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X