ಮತ್ತೆ ಯಡಿಯೂರಪ್ಪಗೇ ಅಧಿಕಾರ ಹಸ್ತಾಂತರ: ಸಿಎಂ ಸದಾನಂದ

ಯಡಿಯೂರಪ್ಪನವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ರಾಜಕೀಯ ಕುತಂತ್ರದಿಂದ ಅಧಿಕಾರ ಕಳೆದುಕೊಂಡಿದ್ದಾರೆ. ಆದರೆ ಎಲ್ಲ ಆರೋಪಗಳಿಂದ ಮುಕ್ತರಾಗಿ ಫೀನಿಕ್ಸ್ ನಂತೆ ಮತ್ತೆ ಎದ್ದು ಬಂದು ಆಡಳಿತದ ಚುಕ್ಕಾಣಿ ಹಿಡಿದು ಅಧಿಕಾರ ನಡೆಸುತ್ತಾರೆ ಎಂದು ಸಾಕ್ಷಾತ್ ಮುಖ್ಯಮಂತ್ರಿಯವರೇ ತುಂಬು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.
ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ ಪ್ರಚಾರ ವೇಳೆ ಸದಾನಂದರು ಈ ಮಾಹಿತಿ ನೀಡಿದ್ದಾರೆ. 'ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಯಡಿಯೂರಪ್ಪ ಅವರ ಪರಿಶ್ರಮದಿಂದಾಗಿ. ವಾಜಪೇಯಿ ದೃಷ್ಟಿಕೋನದಲ್ಲಿ ಯಡಿಯೂರಪ್ಪ ನಡೆಯುತ್ತಿದ್ದಾರೆ. ಇದರಿಂದ ಕೆಂಗೆಟ್ಟ ಪ್ರತಿಪಕ್ಷಗಳು ಅಪಪ್ರಚಾರ ಮತ್ತು ತೇಜೋವಧೆಯಲ್ಲಿ ನಿರತವಾಗಿವೆ.
ಯಡಿಯೂರಪ್ಪ ಅವರನ್ನು ಮುಗಿಸಿದರೆ ಬಿಜೆಪಿಯನ್ನು ಮುಗಿಸಿದಂತೇ ಎಂಬುದು ಅವರ ಲೆಕ್ಕಾಚಾರ. ಆದರೆ ಇದ್ಯಾವುದೂ ಕೈಗೂಡುವುದಿಲ್ಲ. ಎಲ್ಲ ಆರೋಪಗಳಿಂದ ಮುಕ್ತರಾಗಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಸದಾನಂದರು ಯಡಿಯೂರಪ್ಪ ಅವರಲ್ಲಿ ತಮ್ಮ ಅಖಂಡ ನಿಷ್ಠೆ ಪ್ರದರ್ಶಿಸಿದ್ದಾರೆ.












Click it and Unblock the Notifications