2 ದಿನದಲ್ಲಿ ಎಚ್ಡಿಕೆ ವಿರುದ್ದ ದಾಖಲೆ ಬಿಡುಗಡೆ, ಯಡ್ಡಿ

B S Yeddyurappa
ಹೊನ್ನಾಳಿ ನ 15: ರಾಜ್ಯದ ನಾನಾ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ವಾಪಾಸಾಗುತ್ತೇನೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳ ಕುರಿತು ದಾಖಲೆ ಹೊಂದಿದ್ದೇನೆ, ಇನ್ನೆರಡು ದಿನಗಳಲ್ಲಿ ದಾಖಲೆ ಸಮೇತ ಇದನ್ನು ಬಿಡುಗಡೆ ಮಾಡಲಿದ್ದೇನೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಕುಮಾರಸ್ವಾಮಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇನ್ನು ಮುಂದೆ ದಾಖಲೆ ಸಮೇತ ಮಾತನಾಡುತ್ತೇನೆ. ಮಾಧ್ಯಮದ ಮುಂದೆ ದಾಖಲೆ ಪ್ರಸ್ತುತ ಪಡಿಸುತ್ತೇನೆ, ಇದಾದ ನಂತರ ರಾಜ್ಯದ ಜನತೆ ಈ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲಿ. ರಾಜ್ಯದಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ ಎನ್ನುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಮತ್ತೆ ಮತ್ತೆ ಹೇಳುತ್ತೇನೆ, ನಾನೇನೂ ತಪ್ಪು ಮಾಡಿಲ್ಲ. ರಾಜಕೀಯ ದ್ವೇಷಕ್ಕೆ ನಾನು ಬಲಿಯಾದೆ, ದೇವರು ದೊಡ್ಡವನು ಜೈಲಿನಿಂದ ಬಿಡುಗಡೆಯಾದೆ ಎಂದು ಯೆಡಿಯೂರಪ್ಪ ವಿಷಾದ ವ್ಯಕ್ತ ಪಡಿಸಿದ್ದಾರೆ.

ಈ ಯಡಿಯೂರಪ್ಪ ಸುಮ್ಮಿರುವವನಲ್ಲ. ಮುಂದಿನ ದಿನದಲ್ಲಿ ನೋಡುತ್ತಿರಿ. ನನ್ನ ವಿರುದ್ದ ಯಾರು ಕತ್ತಿ ಮೆಸೆದಿದ್ದಾರೋ ಅವರು ನಮ್ಮ ಪಕ್ಷದಲ್ಲೇ ಇರಲಿ ಎಲ್ಲೇ ಇರಲಿ ನಾನು ಸುಮ್ಮನೆ ಬಿಡುವುದಿಲ್ಲ. ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ಬಹಳ ನೋವು ಅನುಭವಿಸಿದ್ದೇನೆ. ವಿನಾ ಕಾರಣ ನನ್ನ ಮೇಲೆ ಆಪಾದನೆ ಬಂತು, ಇರಲಿ ಎಲ್ಲದಕ್ಕೂ ಕಾಲ ಉತ್ತರ ನೀಡುತ್ತೆ ಎಂದು ಯಡ್ಡಿ ತನ್ನ ವಿರೋಧಿ ಪಾಳಯಕ್ಕೆ ಟಾಂಗ್ ನೀಡಿದ್ದಾರೆ.

ಬಳ್ಳಾರಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳ ಬೇಕೇ ಬೇಡವೇ ಎಂದು 17ನೇ ತಾರೀಕಿನ ಒಳಗೆ ನಿರ್ಧಾರ ಮಾಡುತ್ತೇನೆ. ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ಅವರ ಗೆಲುವಿಗಾಗಿ ಶ್ರಮಿಸುವ ಆಸಕ್ತಿ ಹೊಂದಿದ್ದೇನೆ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ, ಬಿಜೆಪಿ ಈಗ ಒಡೆದ ಪಕ್ಷ ಎನ್ನುವ ತಪ್ಪು ಕಲ್ಪನೆ ಬೇಡ ಎಂದು ಯಡ್ಡಿ ಸಮಜಾಯಿಷಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+