Get Updates
Get notified of breaking news, exclusive insights, and must-see stories!

ಈ ಶಾಲೆಯಲ್ಲಿ ಚಾಚಾ ನೆಹರೂಗೆ ಕಡೆಯ ವಂದನೆ!

Govt school no more in Chattanahalli
ಚನ್ನರಾಯಪಟ್ಟಣ, ನ. 14 : ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಚಟ್ಟನಹಳ್ಳಿ ಗ್ರಾಮದ ಆ ಆರು ಶಾಲಾ ಮಕ್ಕಳಿಗೆ ಮಕ್ಕಳ ದಿನಾಚರಣೆ ಒಂದು ಕರಾಳ ದಿನವಾಗಲಿದೆ. ಏಕೆಂದರೆ, ಹಳ್ಳಿಯಲ್ಲಿ ಇರುವ ಆ ಒಂದು ಶಾಲೆಯೂ ಕಣ್ಣುಮುಚ್ಚಲಿದೆ. ಆ ಇಡೀ ಶಾಲೆಯಲ್ಲಿ ಇರುವುದು ಕೇವಲ 6 ಮಕ್ಕಳು ಮತ್ರ!

ಕಳೆದ ವಾರ ಯಾದಗಿರಿ ಜಿಲ್ಲೆಯ 72 ಮಕ್ಕಳಿರುವ ಒಂದು ಕೋಣೆಯ ಸರಕಾರಿ ಶಾಲೆ ಇದ್ದೂ ಸತ್ತಂತಿದ್ದರೆ, ಹಾಸನ ಜಿಲ್ಲೆಯ ಈ ಶಾಲೆ ಮಕ್ಕಳಿದ್ದರೂ ಅವರಿಗೆ ಇಲ್ಲದಂತಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುದಕ್ಕೆ ಈ ಎರಡು ಕಥೆಗಳೇ ಸಾಕು. ಈ ಹಳ್ಳಿಯ ಮಕ್ಕಳು ಚಾಚಾ ನೆಹರೂಗೆ ಶಾಲೆಯಲ್ಲಿ ಕಡೆಯ ಬಾರಿ ವಂದನೆ ಸಲ್ಲಿಸಲಿದ್ದಾರೆ.

ಚಟ್ಟನಹಳ್ಳಿಯ ಶಾಲೆಯನ್ನು ಹಳ್ಳಿಯಿಂದ 2 ಕಿ.ಮೀ. ದೂರದಲ್ಲಿ ಅನತಿ ಎಂಬ ಊರಲ್ಲಿರುವ ಸರಕಾರಿ ಹೈಯರ್ ಪ್ರೈಮರಿ ಶಾಲೆಯೊಡನೆ ಕೂಡಿಸಲಾಗುತ್ತಿದ್ದು, ಈ ಆರು ಮಕ್ಕಳು ಇನ್ನು ಆ ಶಾಲೆಗೇ ಹೋಗಬೇಕು. ಆದರೆ, ಆ ಮಕ್ಕಳ ಪಾಲಕರು ಅವರನ್ನು ಅಲ್ಲಿ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಇನ್ನೂ ಅವರಿಗೆ ಹೊಲಗದ್ದೆ ಕೆಲಸವೇ ಗತಿ.

ಕೇವಲ 150 ಜನರಿರುವ ಗ್ರಾಮದಲ್ಲಿ 35 ಹಿಂದುಳಿದ ಕುಟುಂಬದವರು ವಾಸವಿದ್ದಾರೆ. ಕಳೆದ ವಾರ ಚಟ್ಟನಹಳ್ಳಿ ಶಾಲೆಯಲ್ಲಿ 9 ಮಕ್ಕಳಿದ್ದರು, ಈ ವರ್ಷ 6 ಮಕ್ಕಳಿದ್ದಾರೆ. ಇರುವುದು ಒಂದೇ ಕೊಣೆ, ಒಬ್ಬರೇ ಶಿಕ್ಷಕರು, ಇರುವುದು ಒಂದರಿಂದ ಐದನೇ ತರಗತಿಯವರೆಗೆ. ಈ ಲೆಕ್ಕ ಎಲ್ಲ ತಗೊಂಡು ಏನಾಗಬೇಕಾಗಿದೆ. ನಾಳೆಯಿಂದ ಶಾಲೆಯೂ ಇಲ್ಲ, ಮಕ್ಕಳೂ ಮನೆಗೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+