ರಾಜ್ಯಾಧ್ಯಕ್ಷ ಕಿರೀಟ ಯಡ್ಡಿಗೆ ಕೊಡಿ: ರೇಣುಕಾಚಾರ್ಯ

ಸುಮಾರು 40 ವರ್ಷಗಳಿಂದ ಪಕ್ಷದ ಸಂಘಟನೆಗೆ ದುಡಿದಿದ್ದಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ. ಅಸೆಂಬ್ಲಿ ಇರಬಹುದು, ಪಾಲಿಕೆ ಇರಬಹುದು ಎಲ್ಲಾ ಬಗೆಯ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲು ಯಡಿಯೂರಪ್ಪ ಅವರೇ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.
ಯಡಿಯೂರಪ್ಪ ಅವರ ವಿರುದ್ಧ ಸಂಚು ಮಾಡಲಾಗಿದೆ. ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗಿ ಹೊರಬರುತ್ತಾರೆ. ಅವರನ್ನು ಜೈಲಿಗೆ ಕಳಿಸಿದವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ರೇಣುಕಾಚಾರ್ಯ ಅವರು ಹೇಳಿದರು.
ಆದರೆ, ಈಶ್ವರಪ್ಪ ಅವರ ಹೆಸರೆತ್ತದೆ ಮಾರ್ಮಿಕ ಉತ್ತರ ನೀಡಿದರು. ಆದರೆ, ಯಡಿಯೂರಪ್ಪ ಅವರ ಮೊದಲ ಟಾರ್ಗೆಟ್ ಈಶ್ವರಪ್ಪ ಎಂಬುದು ಅವರ ಮಾತಿನಿಂದ ಸ್ಪಷ್ಟವಾಗುತ್ತಿತ್ತು.
ಶಿಷ್ಯನ ಮಾತಿಗೆ ಯಡಿಯೂರಪ್ಪ ಉಲ್ಟಾ ಹೊಡೆದರೆ..?












Click it and Unblock the Notifications