ಬೆಂಗಳೂರಿನಲ್ಲಿ ಇಂದು ಕರವೇ ವಿಧಾನಸೌಧ ಮುತ್ತಿಗೆ

ಮೆಜಿಸ್ಟಿಕ್ ಪ್ರದೇಶದ ಬನಪ್ಪ ಪಾರ್ಕಿನಿಂದ ( ತುಳಸಿತೋಟ) ಬೆಳಗ್ಗೆ 11 ಕ್ಕೆ ಆರಂಭವಾಗುವ ಮೆರವಣಿಗೆ ವಿಧಾನಸೌಧದವರೆಗೆ ಸಾಗಲಿದೆ. ಕನ್ನಡ ರಾಜ್ಯೋತ್ಸವದಿನದಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಬೆಳಗಾವಿಯಲ್ಲಿ ಗಲಾಟೆ ಎಬ್ಬಿಸಿದ್ದಿಲ್ಲದೆ ಮೇಯರ್ ಮುಂದಾ ಬಾಳೆಕುಂದ್ರಿ ಕನ್ನಡಿಗರನ್ನು ಗೂಂಡಾಗಳು ಎಂದು ಬಣ್ಣಿಸಿದ್ದ ವಿರುದ್ಧ ಕರವೇ ಕಿಡಿಕಾರುತ್ತಿದೆ.
ಕರವೇ ಮೆರವಣಿಗೆ ಅಥವಾ ಚಳುವಳಿ ಎಂದರೆ ಸರಕಾರ ಮತ್ತು ಪೋಲೀಸ್ ಇಲಾಖೆಗೆ ಬಿಸಿ ಮುಟ್ಟುವುದು ಸಹಜ. ಹೀಗಾಗಿ ಪೋಲೀಸ್ ಈಗಾಗಲೇ ವಿಧಾನಸೌಧದ ಸುತ್ತಮುತ್ತ ಭಾರೀ ಬಂದೋಬಸ್ತ್ ನಡೆಸಿದೆ. ಈ ನಡುವೆ ನಗರದಲ್ಲಿ ಇಂದು (ನ 8) ಕರ್ನಾಟಕ ಕ್ಷತ್ರಿಯ ಮರಾಠ ಮಹಾಒಕ್ಕೂಟದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯ ಕ್ಷತ್ರಿಯ ಮರಾಠ ಮುಖಂಡರ ಸಮಾವೇಶ ನಡೆಯಲಿದ್ದು, ಎಂಇಎಸ್ ಸಂಘಟನೆಯನ್ನು ಕರ್ನಾಟಕ ನಿಷೇಧಿಸಬೇಕು ಎನ್ನುವುದು ಮರಾಠಿ ಸಂಘದ ಸದಸ್ಯರು ಒಕ್ಕೂರಲಿನ ಒತ್ತಾಯ.












Click it and Unblock the Notifications