ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ವೆಗೆ ಒಲ್ಲೆ ಎಂದ ಪ್ರಿಯಕರ, ಸುಪಾರಿ ಕೊಟ್ಟಳು ರೇವತಿ

By Mahesh
|
Google Oneindia Kannada News

Temple Priest killed by lover Bangalore
ಬೆಂಗಳೂರು, ನ. 6: ಬೇರೆ ಜಾತಿ ಹುಡುಗಿಯನ್ನು ಮನೆಗೆ ಕರೆತರಬೇಡ ಎಂದು ಅವನ ಮನೆಯಲ್ಲಿ ಹೇಳಿದ್ದರು. ಅವನು ಅದನ್ನು ತನ್ನ ಪ್ರೇಮಿಗೆ ಹೇಳಿದ. ಮುಂದೆ ಮದ್ವೆಗೆ ಒಲ್ಲೆ ಎಂದ ಕಾರಣಕ್ಕೆ ಪ್ರಿಯಕರನನ್ನು ಆತನ ಪ್ರೇಯಸಿಯೇ ಭೀಕರವಾಗಿ ಹತ್ಯೆ ಮಾಡಿಸಿದ ಘಟನೆ ನಡೆದಿದೆ.

ಬೆಂಗಳೂರು ಹೊರವಲಯದ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾದ
ಯುವಕ 24 ವರ್ಷದ ಸಂದೀಪ ದೇಗುಲವೊಂದರಲ್ಲಿ ಅರ್ಚಕನಾಗಿದ್ದ. ಆತನಿಗೆ ರೇವತಿ ಎಂಬ 20 ವರ್ಷದ ಯುವತಿ ಜೊತೆ ಪ್ರೇಮಾಂಕುರವಾಗಿತ್ತು.

ಆದರೆ, ಸಂದೀಪ ಪೋಷಕರಾದ ಶೃಂಗೇರಿ ಮೂಲದ ಶಂಕರ್ ಭಟ್ ಅಲಿಯಾಸ್ ಶೃಂಗೇಶ್ವರ, ಸರೋಜಮ್ಮ ಈ ಪ್ರೇಮ ಕಥೆ ಅಂತ್ಯಗೊಳಿಸಲು ನಿರ್ಧರಿಸಿ, ಬೇರೆ ಜಾತಿ ಹುಡ್ಗಿ ಬೇಡ ಎಂದು ಬಿಟ್ಟರು.

ವಸಂತಪುರದ ನಿವಾಸಿ ರೇವತಿ ಮನೆಯಲ್ಲಿ ಬೇರೊಬ್ಬನ ಜೊತೆ ಮದುವೆ ಪ್ರಸ್ತಾಪ ನಡೆಯುತ್ತಿತ್ತು. ಈ ನಡುವೆ ಸಂದೀಪ ಮದುವೆ ಸಾಧ್ಯವಿಲ್ಲ ಎಂದಿದ್ದ.

ರಾತ್ರಿ ಬಾಗಿಲು ಬಡಿದಳು: ಇದರಿಂದ ಕೋಪಗೊಂಡ ರೇವತಿ ಇಬ್ಬರು ಯುವಕರೊಂದಿಗೆ ಭುವನೇಶ್ವರಿ ನಗರದಲ್ಲಿನ ಸಂದೀಪನ ಮನೆಗೆ ಮಧ್ಯರಾತ್ರಿ ವೇಳೆ ಬಂದು ಬಾಗಿಲು ಬಡಿದಿದ್ದಾಳೆ.

ಈ ಸಂದರ್ಭದಲ್ಲಿ ಸಂದೀಪನ ತಾಯಿ ಸರೋಜಮ್ಮ ರೇವತಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದರೆ, ರೇವತಿ ಜೊತೆ ಬಂದಿದ್ದವರು ಸರೋಜಮ್ಮ, ಶೃಂಗೇಶ್ವರ, ಪುತ್ರಿ ಅರ್ಚನ, ಅಳಿಯ ಅರುಣ್ ರನ್ನು ಕೆಡವಿ ಒಳಗಿದ್ದ ಸಂದೀಪನ ಕೊರಳು ಕೊಯ್ದು ಹೋಗಿದ್ದಾರೆ.

ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಹುಡುಕಾಟ ನಡೆದಿದೆ.

English summary
A 25-year-old temple priest murdered by his lover girl by slitting the throat in his residence in Bhuvaneshwarinagar of Talaghattapura Police station limits in Bangalore. Priest was allegedly refused to marry her because she belongs to a different caste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X