ಕಸಾಯಿಖಾನೆ ಜಾನುವಾರು : ಯಲ್ಲಾಪುರದಲ್ಲಿ 3 ಬಂಧನ
ಯಲ್ಲಾಪುರ,
ಅ.25: ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂವರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಒಟ್ಟು 9 ಎಮ್ಮೆ ಹಾಗೂ ಎತ್ತುಗಳನ್ನು ಪಾರುಮಾಡಿದ್ದು, ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. id="toptextpromo">ಮುಂಬೈದಿಂದ
ಭಟ್ಕಳ ಹಾಗೂ ಮಂಗಳೂರಿನ ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿದ್ದ ಏಳು ಎಮ್ಮೆ ಹಾಗೂ ಎರಡು ಎತ್ತುಗಳ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಲಾರಿಯನ್ನು ಬೆನ್ನಟ್ಟಿ ಇಡಗುಂದಿ ಬಳಿ ವಶಕ್ಕೆ ತೆಗೆದುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಂಬೈ
ನಿವಾಸಿಗಳಾದ ಬೋರಾ ಅಸ್ಲಾಂ ಅನ್ಸಾರಿ (18), ನಿಸ್ಸಾರ್ ಅಹಮ್ಮದ್ ಖುರೇಶಿ (48) ಮತ್ತು ಲಾರಿಯ ಚಾಲಕ ಇಕ್ಬಾಲ್ ಹುಸೇನ್ ಖುರೇಶಿ (37) ಬಂಧಿತರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಗುಡಿಮನಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.











Click it and Unblock the Notifications