ಯಡಿಯೂರಪ್ಪಗೆ ಇನ್ನು ಮುಂದೆ ಜೈಲೇ ಗತಿ !
ಬೆಂಗಳೂರು,
ಅ. 15: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜಾಮೀನು ಅರ್ಜಿ ಲೋಕಾಯುಕ್ತ ಕೋರ್ಟಿನಿಂದ ವಜಾಗೊಂಡಿದೆ. ಇದರಿಂದಾಗಿ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಹಾಕಲಾಗಿದ್ದ ಭೂ ಹಗರಣ ಕೇಸಿನಡಿ ಯಡಿಯೂರಪ್ಪನವರು ಜೈಲು ಸೇರುವುದು ಖಚಿತವಾಗಿದೆ. id="toptextpromo">ಲೋಕಾಯುಕ್ತ
ವಿಶೇಷ ನ್ಯಾಯಾಲಯ ಶನಿವಾರ, ಅ. 15ರಂದು ಮಧ್ಯಾಹ್ನ ಈ ಮಹತ್ವದ ತೀರ್ಪನ್ನು ನೀಡಿದೆ. ಇದರ ಪ್ರಕಾರ, ಯಡಿಯೂರಪ್ಪ ಮತ್ತು ಅವರ ಜೊತೆ ಭೂ ಹಗರಣದಲ್ಲಿ ಭಾಗಿಯಾಗಿರುವ ಕೃಷ್ಣಯ್ಯ ಶೆಟ್ಟಿಗೆ ಜಾಮೀನು ನಿರಾಕರಿಸಲಾಗಿದೆ. ಉಳಿದ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದ್ದು, ಸಂಜೆ 4 ಗಂಟೆಯೊಳಗೆ ಅವರಿರುವ ರೇಸ್ ಕೋರ್ಸ್ ನಿವಾಸದಿಂದ ಅವರನ್ನು ಬಂಧಿಸುವ ಸಾಧ್ಯತೆಯಿದೆ.











Click it and Unblock the Notifications