ರಾವಣನನ್ನು ಸುಡಲು ನಿರ್ಧರಿಸಿದ ಹಜಾರೆ

"ಭ್ರಷ್ಟಾಚಾರವೆಂಬ ರಾವಣನನ್ನು ನಾನಿಂದು ಸುಡಲಿದ್ದೇನೆ. ಈ ದಸರಾ ಹಬ್ಬದಲ್ಲಿ ನಾವೆಲ್ಲರು ನಮ್ಮೊಳಗಿರುವ, ನಮ್ಮ ದೇಶದಲ್ಲಿರುವ ಭ್ರಷ್ಟಾಚಾರವೆಂಬ ರಾವಣನನ್ನು ದಹಿಸಿಬಿಡೋಣ" ಎಂದು ಹಜಾರೆ ಹೇಳಿದ್ದಾರೆ.
ಅಣ್ಣಾ ಹಜಾರೆ ಗ್ರಾಮದಲ್ಲಿ ದಸರಾವನ್ನು ಬೃಹತ್ ಹಬ್ಬವಾಗಿ ಆಚರಿಸಲಾಗುತ್ತಿದೆ. ಸುಮಾರು ಹತ್ತು ಗಂಟೆಗಳ ಕಾಲ ನಡೆಯುವ ದಸರಾ ಹಬ್ಬದಲ್ಲಿ ನಾಡಿನ ಸಂಸ್ಕೃತಿ, ಆಚರಣೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅಂದಹಾಗೆ ಇಂದು ಸಂಜೆ 5 ಗಂಟೆಗೆ ಅಣ್ಣಾ ಭ್ರಷ್ಟಾಚಾರವೆಂಬ ರಾವಣನ ಪ್ರತಿಕೃತಿ ದಹಿಸಲಿದ್ದಾರೆ.












Click it and Unblock the Notifications