ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಕಂಪ ಅಮೆರಿಕದಲ್ಲಿ ಆಗಿದ್ದರೆ ಆವಾಗ ಗೊತ್ತಾಗ್ತಿತ್ತು, ಬೇಳೆ ಕಾಳು!

By Srinath
|
Google Oneindia Kannada News

earthquake-nepal-pm-statement-irks-america
ಕಠ್ಮಂಡು, ಸೆ.22: ಭೂಕಂಪಗಳು ನೇಪಾಳದಂತಹ ಬಡರಾಷ್ಟ್ರಗಳ ಬದಲು ಅಮೆರಿಕ ಮತ್ತಿತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಂಭವಿಸಲಿ ಎಂದು ತಾನು ಪ್ರಾರ್ಥಿಸುವೆನೆಂಬ ಬಾಲಿಶ ಹೇಳಿಕೆಯನ್ನು ನೀಡುವ ಮೂಲಕ ನೇಪಾಳದ ಹಂಗಾಮಿ ಪ್ರಧಾನಿ ಬಿಜಯ್ ಕುಮಾರ್ ಗಚೆದಾರ್ ವಿವಾದಕ್ಕೆ ಸಿಲುಕಿದ್ದಾರೆ.

ಪ್ರಸ್ತುತ ನೇಪಾಳದ ಗೃಹ ಸಚಿವರೂ ಆಗಿರುವ ಗಚೆದಾರ್, ಕಳೆದ ಭಾನುವಾರ ದೇಶದಲ್ಲಿ ಸಿಕ್ಕಿಂ ಕೇಂದ್ರೀಕೃತ ಭೂಕಂಪದ ಸಂತ್ರಸ್ತರಿಗೆ ನೆರವಾಗಲು ಸರಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಸಂಸತ್‌ನಲ್ಲಿ ವಿವರಿಸುತ್ತಿದ್ದ ಸಂದರ್ಭದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

'ಭೂಕಂಪಗಳನ್ನು ತಡೆಯಲು ಸಾಧ್ಯವಿಲ್ಲ. ಭಾರತಕ್ಕಾಗಲಿ ಅಥವಾ ಚೀನಕ್ಕಾಗಲಿ ಹಾಗೆ ಮಾಡುವುದು ಅಸಾಧ್ಯ. ಹೀಗಿರುವಾಗ ನಾವೇನು ಮಾಡಲು ಸಾಧ್ಯ? ಭೂಕಂಪಗಳು ನೇಪಾಳದ ಬದಲಿಗೆ ಅಮೆರಿಕ ಮತ್ತಿತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಂಭವಿಸಲಿ ಎಂದು ನಾನು ಪಶುಪತಿನಾಥನಲ್ಲಿ ಪ್ರಾರ್ಥಿಸುವೆ' ಎಂದು ಗಚೆದಾರ್ ಹೇಳಿದ್ದರು.

ನೂತನ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 66ನೆ ಮಹಾಧಿವೇಶನದಲ್ಲಿ ಪಾಲ್ಗೊಂಡಿರುವಾಗಲೇ ಗಚೆದಾರ್ ಈ ಹೇಳಿಕೆ ನೀಡಿರುವುದು ನೇಪಾಳ ಸರಕಾರವನ್ನು ಪೇಚಿನಲ್ಲಿ ಸಿಲುಕಿಸಿದೆ.

English summary
Nepal Home minister Bijay Kumar Gachhedar, who is also a deputy prime minister in the new Maoist-led cabinet, made the politically incorrect statement in parliament recently while answering lawmakers' queries about the state's efforts to provide relief to people hit by Sunday's earthquake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X