4 ಲಕ್ಷ ಕೋಟಿ ಕಪ್ಪುಹಣ ವಾಪಸ್ ಬಾ..ಬಾ :ರಾಮದೇವ್

ಝಾನ್ಸಿಯಿಂದ ಆರಂಭವಾದ ಈ ಯಾತ್ರೆ 1,00,000 ಕಿ.ಮೀ ಕ್ರಮಿಸಿ ಪ್ರಯಾಗ್ ನಲ್ಲಿ ಕೊನೆಗೊಳ್ಳಲಿದೆ.
ಝಾನ್ಸಿಯ ವೀರರಾಣಿ ಲಕ್ಷ್ಮೀಭಾಯಿ ನೆಲದಿಂದ ಈ ಮಹಾಸಂಗ್ರಾಮ ಆರಂಭಿಸುತ್ತಿದ್ದೇನೆ. ಕಪ್ಪು ಹಣ, ಭ್ರಷ್ಟಾಚಾರ ವಿರುದ್ಧ ಜನತೆಯನ್ನು ಎಚ್ಚರಿಸುವುದು ನನ್ನ ಉದ್ದೇಶ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪಾಪಕೂಪವಾಗಿದೆ ಎಂದಿರುವ ರಾಮದೇವ್, ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಆಡಳಿತವನ್ನು ಶ್ಲಾಘಿಸಿದ್ದಾರೆ.
4 ಲಕ್ಷ ಕೋಟಿ ರು ಕಪ್ಪು ಹಣ ಭಾರತಕ್ಕೆ ಹಿಂತಿರುಗುವವರೆಗೂ ನಮ್ಮ ಹೋರಾಟ ನಿಲ್ಲದು, ಬಿಜೆಪಿ ಯಾತ್ರೆ, ಉಪವಾಸ ಬಗ್ಗೆ ಹೇಳಿಕೆ ನೀಡಲು ನಾನು ಬಿಜೆಪಿ ವಕ್ತಾರನಲ್ಲ ಎಂದು ರಾಮದೇವ್ ಗುಡುಗಿದ್ದಾರೆ.











Click it and Unblock the Notifications